ಕಾಸರಗೋಡು ಜಿಲ್ಲೆಯ ಹಳೆಯ ಚೂರಿ ಎಂಬಲ್ಲಿ ಮಸೀದಿಯ ಮುಅಝ್ಝಿನ್ ಉದ್ಯೋಗದಲ್ಲಿರುವ ರಿಯಾಝ್ ಮುಸ್ಲಿಯಾರರನ್ನು ರಾತ್ರಿ ಹೊತ್ತು ಮಸೀದಿಯೊಳಗೆ ನುಗ್ಗಿದ ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆಗೈದಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆರ್ಫ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅವರ ಕುಟುಂಬಕ್ಕೆ ಮರಣದ ನೋವನ್ನು ಸಹಿಸಲು ಸೃಷ್ಟಿಕರ್ತನು ಸಹನೆಯನ್ನು ಕರುಣ ಸಲಿ.
ಕಾಸರಗೊಡು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಾಂತಿಯ ವಾತಾವರಣಗಳು ಸೃಷ್ಟಿಯಾಗಿದ್ದು ಇದನ್ನು ಸಹಿಸದ ಫ್ಯಾಸಿಸ್ಟ್ ಶಕ್ತಿಗಳು ಈ ರೀತಿಯ ಹತ್ಯೆಗಳನ್ನು ಮಾಡಿ ಅಶಾಂತಿ ಸೃಷ್ಟಿಸಿ ಕೋಮು ಗಲಭೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ. ಶಾಂತಿಯುತವಾಗಿದ್ದಂತಹ ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಸುವುದು ಇವರ ಚಾಳಿಯಾಗಿ ಬಿಟ್ಟಿದೆ. ಆರಾಧನಾಲಯಗಳಿಗೆ ನುಸುಳಿ ನಡೆಸುವಂತಹ ಇಂತಹ ಕ್ರೂರ ಕೃತ್ಯಗಳು ಅಪಾಯಕಾರಿ ಬೆಳವಣ ಗೆಯಾಗಿದೆ.
ಆದುದರಿಂದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಹತ್ಯೆಗೈದಂತಹ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹನೀಫ್ಖಾನ್ ಕೊಡಾಜೆಯವರು ಆಗ್ರಹಿಸಿದ್ದಾರೆ.
ಇತೀ ತಮ್ಮ ವಿಶ್ವಾಸಿ
ಇಕ್ಬಾಲ್ ಬೆಳ್ಳಾರೆ
ಸ್ಥಳ : ಮಂಗಳೂರು ಕಾರ್ಯದರ್ಶಿ
ದಿನಾಂಕ : 22/03/2017 ಎಸ್ಡಿಪಿಐ, ದಕ್ಷಿಣ ಕನ್ನಡ ಜಿಲ್ಲೆ
9611695453