ಭಟ್ಕಳ: ಎರಡು ದಿನಗಳ ಮಾರಿ ಉತ್ಸವಕ್ಕೆ ತೆರೆ
ಭಟ್ಕಳ: ನಗರದಲ್ಲಿ ನಡೆದ ಎರಡು ದಿನಗಳ ಮಾರಿ ಉತ್ಸವ ಗುರುವಾರದಂದು ಅತ್ಯಂತ ವಿಜೃಂಬಣೆಯಿಂದ ನೂರಾರು ಭಕ್ತರು ಸೇರಿ ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜಿನೆಯಾಗುವುದರ ಮೂಲಕ ತೆರೆಕಂಡಿತು.
ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿ ಜಾತ್ರೆ ಮಾರಿ ಮೂರ್ತಿಯನ್ನು ಬುಧವಾರ ಬೆಳಗಿನ ಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಟಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭವಾಗಿತ್ತು.
ಮಾರಿಕಾಂಬಾ ದೇವಿಯ ದರ್ಶನವನ್ನು ಶಾಸಕ ಮಂಕಾಳ ವೈದ್ಯ ಪಡೆದುಕೊಂಡು ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಮಾರಿಕಾಂಬಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಉಪಾಧ್ಯಕ್ಷ ರಘುವೀರ ಬಾಳ್ಗಿ, ಕಾರ್ಯದರ್ಶಿ ಆಸರಕೇರಿ ಶ್ರೀಧರ ನಾಯ್ಕ, ಎನ್.ಡಿ.ಖಾರ್ವಿ, ಈಶ್ವರ ದೊಡ್ಮನೆ, ಪರಮೇಶ್ವರ ದೇವಾಡಿಗ, ದಿನೇಶ ನಾಯ್ಕ, ಗೋವಿಂದ ನಾಯ್ಕ, ದೀಪಕ್ ನಾಯ್ಕ, ವೆಂಕಟೇಶ ನಾಯ್ಕ, ಆಸರಕೇರಿ ಕೃಷ್ಣಾ ನಾಯ್ಕ, ನರೇಂದ್ರ ನಾಯಕ, ಮಾದೇವ ಮೊಗೇರ, ಶಂಕರ ಶೆಟ್ಟಿ, ಶ್ರೀಪಾದ ಕಂಚುಗಾರ, ಗುರು ಸಾಣಿಕಟ್ಟೆ, ಗೋಪಾಲ ಕೋಡಿಯಾ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಮಾರಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ ಎರ್ಪಡಿಸಿತ್ತು. ಕಾರವಾರದ ಹೆಚ್ಚುವರಿ ಎಸ್.ಪಿ. ಗೋಪಾಲ ಬ್ಯಾಕೋಡ, ಭಟ್ಕಳ ಡಿ.ವೈ.ಎಸ್.ಪಿ. ಒ.ಎಸ್. ಶಿವಕುಮಾರ್, ಸರ್ಕಲ್ ಇನ್ಸಪೆಕ್ಟರ್ ಸುರೇಶ ನಾಯಕ, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಎಚ್.ಬಿ.ಕುಡಗುಂಟಿ, ಅಣ್ಣಪ್ಪ ಮೊಗೇರ, ಪರಮೇಶ್ವರಪ್ಪ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಮೀಸಲು ಪಡೆಯ ಪೊಲೀಸರು, ಜಿಲ್ಲೆಯ ವಿವಿದ ತಾಲೂಕಿನಿಂದ ಬಂದ ಪೊಲೀಸರು ಬಂದೋಬಸ್ತ್ನಲ್ಲಿ ಭಾಗವಹಿಸಿದ್ದರು. (ಫೋಟೊ: ೨೦-ಬಿಕೆಎಲ್-೦೨-ಮಾರಿ ಉತ್ಸವ)