ಮುರುಡೇಶ್ವರ ಹೆದ್ದಾರಿಯಲ್ಲಿ ರಸ್ತೆ ಅಪಘಾತ;ಮಹಿಳಾ ಪೊಲೀಸ್ ಪೇದೆ ಸಾವು
ಭಟ್ಕಳ: ತಾಲೂಕಿನ ಮುರುಡೇಶ್ವರ ರಾ.ಹೆ.೬೬ರಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಮರಣ ಹೊಂದಿದ್ದಾರೆ.
ಮೃತ ಪೊಲೀಸ್ ಪೇದೆಯನ್ನು ಮುರುಡೇಶ್ವರ ಪೊಲೀಸ್ ಠಾಣೆಯ ಮೃಧುಲಾ ಆಚಾರ್ಯ(೩೭) ಎಂದು ಗುರುತಿಸಲಾಗಿದೆ.
ಇವರು ಸ್ಕೂಟಿಯಲ್ಲಿ ಮುರುಡೇಶ್ವರ ಕ್ರಾಸ್ ನಿಂದ ಹೆದ್ದಾರಿ ದಾಟುವ ಸಂದರ್ಭದಲ್ಲಿ ಭಟ್ಕಳ ಮಾರ್ಗವಾಗಿ ಕಾರವಾರ ಕಡೆ ಹೋಗುವ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇವರು ಕುಂದಾಪುರ ಮೂಲದ ನಿವಾಸಿಯಾಗಿದ್ದು ಭಟ್ಕಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಆರು ತಿಂಗಳಿಂದ ಮುರುಡೇಶ್ವರಕ್ಕೆ ವರ್ಗಾವಾಗಿದ್ದರು. ಮುರಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.