ಭಟ್ಕಳ:ಗಡಿಭಾಗವಾದ ಸಾಗರ ತಾಲೂಕಿನ ಕಾಗಲ್ ವ್ಯಾಪ್ತಿಯ ನಾಗವಳ್ಳಿ ಪ್ರಾಥಮಿಕ ಶಾಲೆ ಬಳಿ ಭಾನುವಾರದಂದು ಸಂಜೆ ವೇಳೆ ಬೈಕ್ ಸವಾರನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.
ಚಿರತೆ ದಾಳಿಗೊಳಗಾದವರವರು ಕೆ.ವಿ.ಥೋಮಸ್ (35) ನಾಗವಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಬೈಕ ಸವಾರ ತನ್ನ ಕೆಲಸ ಮುಗಿಸಿ ನಾಗವಳ್ಳಿಯ ಮನೆ ಕಡೆ ಬರುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದಾಳಿಯಿಂದ ಸವಾರ ಬೈಕನಿಂದ ಕೆಳಗೆ ಬಿದ್ದಿದ್ದು ಬೈಕ್ ಸವಾರನ ಬಲಗೈ, ಹೊಟ್ಟೆ, ಎಡಗಾಲನ್ನು ತನ್ನ ಉಗುರಿನಿಂದ ಪರಚಿದ್ದು, ಕೈಗೆ ಬಲವಾದ ಗಾಯವಾಗಿದೆ. ಇದೇ ವೇಳೆ ಚಿರತೆ ಸವಾರನ ಕುತ್ತಿಗೆಗೆ ಬಾಯಿ ಹಾಕುವುದನ್ನು ಗಮನಿಸಿದ್ದು, ತಾನು ಧರಿಸಿದ ಲುಂಗಿಯನ್ನು ಕಳಚಿ ಚಿರತೆ ಕುತ್ತಿಗೆಯನ್ನು ಹಿಡಿದು ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ.
ನಂತರ ಚಿರತೆ ಅಲ್ಲಿನ ಮನೆಯೊಂದರ ಕೊಟ್ಟಿಗೆಯಲ್ಲಿನ ಎರಡು ದನ ಕರದ ಮೇಲೆ ದಾಳಿ ನಡೆಸಿ ದನದ ಕುತ್ತಿಗೆಯನ್ನು ಮುರಿದು ಹೋಗಿದೆ ಎಂದು ತಿಳಿದು ಬಂದಿದೆ.
ಅದ್ರಷ್ಟವಶಾತ ದಾಳಿಗೊಳಗಾದ ಬೈಕ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದಾದ ಕೆಲ ಗಂಟೆಯ ಬಳಿಕ ಮತ್ತೋರ್ವ ಬೈಕ ಸವಾರನ ಮೇಲೆ ಚಿರತೆ ದಾಳಿ ನಡೆಸಿದ್ದು, ಸವಾರ ದಾಳಿಯಿಂದ ಪಾರಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣಕ್ಕೆ ಅಲ್ಲಿನ ಸ್ಥಳೀಯರು ಚರ್ಚ ಬಳಿ ತೆರಳಿ ಸವಾರನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹಿನ್ನಲೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದು ಪರಿಶೀಲನೆ ನಡೆಸಿ ಕಾರ್ಗಲ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ