ಚುರಮುರಿ ವಾಪಾರಸ್ಥನ ಅಂಗಡಿಗೆ ನುಗ್ಗಿದ ಲಾರಿ : ಪ್ರಾಣಹಾನಿಯಿಂದ ಬಚಾವ್
ಮುಂಡಗೋಡ: ಪಟ್ಟಣದ ಸಂತೆ ಮಾರ್ಕೆಟ್ನಲ್ಲಿ ಸೋಮವಾರ ಸಂಜೆ ಲಾರಿಯ ಕ್ಲೀನರ್ನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದ ಸಂತೆಯಲ್ಲಿನ ಚುರಮುರಿ ವಾಪಾರಸ್ಥನ ಅಂಗಡಿಗೆ ಮಿನಿಲಾರಿ ನುಗ್ಗಿ ಹಾನಿ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ
ಪಟ್ಟಣದ ಸಂತೆಯು ಪ್ರತಿ ಸೋಮವಾರ ಜರುಗುತ್ತದೆ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಮತ್ತು ವ್ಯಾಪಾರಸ್ಥರು ಬರುತ್ತಾರೆ. ವ್ಯಾಪಾರಸ್ಥರು ತಮ್ಮ ತರಕಾರಿ, ಹಣ್ಣು ಹಂಪಲ ಮತ್ತಿತರ ದಿನಸಿ ವಸ್ತುಗಳನ್ನು ಲಾರಿಗಳ ಮೇಲೆ ತರುತ್ತಾರೆ. ಸಂತೆ ಮಾರ್ಕೆಟ್ನಲ್ಲಿ ಬರಲು ಮತ್ತು ಹೋಗಲು ಒಂದು ನಿಗದಿತ ವೇಳೆ ಮಾಡಿರುತ್ತಾರೆ. ಇದನ್ನೆಲ್ಲ ಗಾಳಿಗೆ ತೂರಿ ಲಾರಿ ಚಾಲಕರು ಮತ್ತು ಕ್ಲೀನರ್ಗಳು ಸಂತೆಯಲ್ಲಿ ಸಾರ್ವಜನಿಕರಿದ್ದರೂ ಸಹಿತ ಲಾರಿಗಳನ್ನು ಸಂತೆ ಮಾರ್ಕೆಟ್ನಲ್ಲಿಯೇ ಹೊಕ್ಕಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಚುರಮುರಿ ವ್ಯಾಪಾರಸ್ಥನ ಅಂಗಡಿಗೆ ಲಾರಿಯನ್ನು ನುಗ್ಗಿಸಿ ಇದರಿಂದ ಅಲ್ಲಿಯೇ ಇದ್ದ ಸಾರ್ವಜನಿಕರು ಮತ್ತು ಚುರಮುರು ಖರೀದಿ ಮಾಡಲು ಬಂದ ಗ್ರಾಹಕರು ಒಮ್ಮೆಲೇ ಗಾಬರಿಗೊಂಡು ಪ್ರಾಣ ಭಯದಿಂದ ತಳ್ಳಾಟ ನೂಕಾಟ ಮಾಡಬೇಕಾಯಿತು. ಪಟ್ಟಣ ಪಂಚಾಯಿತಿಯವರು ಜನಸಂದಣಿ ಕಡಿಮೆಯಾದ ಮೇಲೆ ವಾಹನಗಳನ್ನು ಸಂತೆಯೊಳಗೆ ಬಿಡಬೇಕು. ಏನಾದರೂ ಅನಾಹುತವಾದರೆ ಇಲ್ಲಿನ ಪಟ್ಟಣ ಪಂಚಾಯಿತಿಯವರು ನಿರ್ಲಕ್ಷ್ಯಧೋರಣೆಯೇ ಕಾರಣ ಎಂದು ಅಲ್ಲಿದ್ದ ಸಾರ್ವಜನಿಕರ ಮಾತಾಗಿದೆ.