ಕೋಲಾರ: ಕಾಣೆಯಾದ ಮಕ್ಕಳ ಪತ್ತೆಗಾಗಿ ಸಹಕರಿಸಿ

Source: shabbir | By Arshad Koppa | Published on 24th August 2017, 8:27 AM | State News | Guest Editorial |

ಕೋಲಾರ, ಆಗಸ್ಟ್ 23 :      ಮಸ್ಕಂ ಬಾಲಕರ ಬಾಲ ಮಂದಿರದಲ್ಲಿದ್ದ ಸತ್ಯ ಬಿನ್ ವೆಂಕಟೇಶ್ (10 ವರ್ಷ), ಎಂಬ ಬಾಲಕನು ಬಾಲ ಮಂದಿರದಿಂದ ದಿನಾಂಕ:08-01-2015 ರಂದು ಸಂಜೆ ಸುಮಾರು 6-15 ಗಂಟೆಯ ಸಮಯದಲ್ಲಿ ಕಾಣೆಯಾಗಿರುತ್ತಾರೆ. 


ಶಿವ ಶಂಕರ್ (7 ವರ್ಷ)

ಮತ್ತು ಯುವರಾಜ್ (5 ವರ್ಷ), ಈ ಇಬ್ಬರು ಬಾಲಕರು ದಿನಾಂಕ 01-04-2015 ರಂದು ಮನೆಯನ್ನು ಬಿಟ್ಟು ಹೋಗಿದ್ದು ಈ ವರೆಗೂ ಪತ್ತೆಯಾಗಿರುವದಿಲ್ಲ.  

                 
      ಕೆ.ಜಿ.ಎಫ್‍ನ ಆಂಡ್ರಸನ್‍ಪೇಟೆ ಪೋಲೀಸ್ ಠಾಣೆ ಸರಹದ್ದು ಮಸ್ಕಂನಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ದಾಖಲಾಗಿದ್ದ ಸುಮಾರು 16 ವರ್ಷ ವಯಸ್ಸಿನ ಬಾಲಕನಾದ ಮುತ್ತುರಾಮನ್ ಬಿನ್ ಸುಬ್ರಮಣ್ಯ ಎಂಬುವರು ದಿನಾಂಕ 07.04.2015 ರಂದು ಬೆಳಗ್ಗೆ 11-50 ಗಂಟೆಯಲ್ಲಿ ಬಾಲಮಂದಿರದ ಶೌಚಾಲಯದ ವೆಂಟಿಲೇಟರ್ ಅನ್ನು ಮುರಿದು ಅದರ ಮೂಲಕ ಓಡಿ ಹೋಗಿ ಕಾಣೆಯಾಗಿರುತ್ತಾನೆ.


    ಚಿರು ಶ್ರೀ ಶಂಕರ್  

ಮತ್ತು 3 ವರ್ಷದ ದಾತ್ರಿ ನಿಸರ್ಗ  ರವರು ಬೀಮಗಾನಹಳ್ಳಿಗೆ ಬಂದು ದಿನಾಂಕ 20-12-2015 ರಂದು  ಕಾಣೆಯಾಗಿರುತ್ತಾರೆ. ಸಂಬಂದಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. 
    

ದೀಪಿಕಾ 17 ವರ್ಷದ ಬಾಲಕಿಯನ್ನು ಕೃಷ್ಣಾ ಎಂಬುವನು ದಿನಾಂಕ 17-01-2017 ರಂದು ಕರೆದು ಕೊಂಡು ಹೋಗಿರುತ್ತಾರೆ. ಇದುವರೆಗೂ ದೀಪಿಕಾ ಸಿಕ್ಕಿಲ್ಲ. ಅದೇ ರೀತಿ

ಪೂಣ ್ಮಾ (16 ವರ್ಷ) ಎಂಬ ಬಾಲಕಿಯು ಕಾಲೇಜಿಗೆ ಹೋದವಳು ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಸದರಿ ಬಾಲಕಿಯು ಕಾಣೆಯಾಗಿದ್ದಾರೆ. 


    ಚಿತ್ರದಲ್ಲಿನ ಬಾಲಕ ದಿನಾಂಕ 06-06-2017 ರಂದು ರಾತ್ರಿ ಸುಮಾರು 7.45 ಗಂಟೆ ಸಮಯದಲ್ಲಿ  ಸಂಸ್ಥೆಯ ಶೌಚಾಲಯದಲ್ಲಿರುವ ಕಿಟಕಿಯನ್ನು ಮುರಿದು ಪರಾರಿಯಾಗಿದ್ದು, ತಕ್ಷಣ ಬಾಲಕರನ್ನು ಸ್ಥಳೀಯ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಸ್ಟ್ಯಾಂಡ್ ಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳೆಲ್ಲ ಕಡೆಯೂ ಹುಡುಕಲಾಗಿ ಬಾಲಕರು ಸಿಕ್ಕಿರುವುದಿಲ್ಲ. 


    ಕಾಣೆಯಾಗಿರುವ ಈ ಎಲ್ಲಾ ಬಾಲಕ-ಬಾಲಕಿಯರು ಪತ್ತೆಯಾದಲ್ಲಿ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೆನರಾ ಬ್ಯಾಂಕ್ ಕಟ್ಟಡ, ಡೂಂ ಲೈಟ್ ಸರ್ಕಲ್ ಹತ್ತಿರ, ಕೋಲಾರ-563101. ಇಲ್ಲಿಗೆ  ದೂರವಾಣಿ ಸಂ:08152-220166 ಅಥವಾ ಇ-ಮೇಲ್ ವಿಳಾಸ : [email protected] ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕೋಲಾರ: ಸಾಕ್ಷ್ಯಾಚಿತ್ರ ನಿರ್ಮಾಣ: ಮಾಹಿತಿಗೆ ಕೋರಿಕೆ
ಕೋಲಾರ, ಆಗಸ್ಟ್ 23 :    ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಅಭಿವೃದ್ಧಿ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಮಹಿಳಾ ಸಾಧಕಿಯರ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಯೋಜನೆ ರೂಪಿಸಿದೆ. 
    ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಮಾಹಿತಿಯನ್ನು ಅಗತ್ಯ ದಾಖಲೆ ಸಹಿತ ಹಿರಿಯ ಸಹಾಯಕ ನಿರ್ದಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೋಲಾರ. ಈ ಕಚೇರಿಗೆ ಆಗಸ್ಟ್ 28 ರ ಒಳಗೆ ತಲುಪುವಂತೆ ಕಳುಹಿಸಲು ತಿಳಿಸಿದೆ. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...