ಕೋಲಾರ : ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಸಮಸ್ಯೆಗಳ ಬಗ್ಗೆ ಮತ್ತು ಕ್ರೀಡಾಂಗಣದ ಬಗ್ಗೆ ಚರ್ಚಿಸುವುದಾಗಿ ಕೋಲಾರ ಜಿಲ್ಲಾಧಿಕಾರಿ ಜಿ. ಸತ್ಯವತಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋಲಾರ ಅಥ್ಲೆಟಿಕ್ಸ್ ಜಿಲ್ಲಾ ಕಾರ್ಯದರ್ಶಿ ಕೆ.ಜಯದೇವ್ರವರ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಕೋಲಾರದಲ್ಲಿ ಕ್ರೀಡೆಗಳು ಅಭಿವೃದ್ಧಿಗೊಳ್ಳಬೇಕು ಮತ್ತು ಕ್ರೀಡಾಪಟುಗಳನ್ನು ತಯಾರು ಮಾಡಬೇಕು ಇದಕ್ಕೆ ಬೇಕಾದಂತಹ ಕ್ರೀಡಾಂಗಣವಾಗಲಿ ಅಥವಾ ಸಾಧನ ಸಲಕರಣೆಗಳಾಗಲಿ ಕೊರತೆ ಇದ್ದಲ್ಲಿ ಅಂದು ಎಲ್ಲಾ ಹಿರಿಯ ಕಿರಿಯ ಕ್ರೀಡಾಪಟುಗಳ ಸಮಸ್ಯೆಗಳನ್ನು ಆಲಿಸಿ, ಚರ್ಚಿಸಿ ಪರಿಹಾರ ನೀಡಲಾಗುವುದೆಂದರು.
ಆದ್ದರಿಂದ ಜಿಲ್ಲೆಯ ಎಲ್ಲಾ ಹಿರಿಯ ಕಿರಿಯ ಕ್ರೀಡಾಪಟುಗಳು ಸಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜನವರಿ 29ರ ಬೆಳಿಗ್ಗೆ 11 ಗಂಟೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಬೇಕೆಂದು ಕೋಲಾರ ಅಥ್ಲೆಟಿಕ್ಸ್ ಜಿಲ್ಲಾ ಕಾರ್ಯದರ್ಶಿ ಕೆ.ಜಯದೇವ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ. ಜಗನ್ನಾಥನ್ ಹಾಗೂ ಉಪಾಧ್ಯಕ್ಷ ಆರ್. ಶ್ರೀನಿವಾಸನ್ ಉಪಸ್ಥಿತರಿದ್ದರು.