ಕೋಲಾರ: ಗಡಿ ಕಾಯುತ್ತಿರುವ ಸೈನಿಕರಿಗೆ ತಮ್ಮ ತಿಂಗಳ ಸಂಬಳದಲ್ಲಿ ಒಂದು ದಿನದ ಹಣವನ್ನು ಸೈನಿಕರ ಕಲ್ಯಾಣನಿಧಿಗೆ ಖಾತೆಗೆ ಜಮಾ ಮಾಡುತ್ತಿರುವ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಬಿ.ನಾಗರಾಜ್ ಕಾರ್ಯವೈಖರಿಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯಡು ಹಾಗೂ ರಾಜ್ಯಪಾಲ ವಜೂಬಾಯಿ ವಾಲಾ ರವರು ಇಂದು ಬೆಂಗಳೂರು ರಾಜಭವನದಲ್ಲಿ ಅಭಿನಂದಿಸಿದರು.
ಈಗಾಗಲೇ ತಮ್ಮ ವೃತ್ತಿಯ ಜೊತೆಜೊತೆಗೆ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಬಿ.ನಾಗರಾಜ್ ರವರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುತ್ತಾ ಕೋಲಾರ ಜಿಲ್ಲೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.