ಯಲ್ದೂರು, ಜು-25 :ಸವಿತಾ ಸಮಾಜವು ಸಮಾಜದ ಎಲ್ಲಾ ರೀತಿಯ ಶುಭಕಾರ್ಯಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ದರಿಂದ ನಮ್ಮ ಸಮಾಜದ ಸದಸ್ಯರು ನಮಗೆ ಸಿಕ್ಕಿರುವ ಈ ಅದೃಷ್ಟದ ವೃತ್ತಿಯನ್ನು ಕೀಳರಿಮೆಯಿಂದ ನೋಡದೇ ಇದನ್ನು ಗೌರವಿಸಿ ಸಮಾಜದಲ್ಲಿ ಹೆಮ್ಮೆಯಿಂದ ಜೀವಿಸಬೇಕು. ನಮ್ಮ ಸಮಾಜದ ಎಲ್ಲಾ ಸದಸ್ಯರು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಆರ್.ಪಿ. ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಯಲ್ದೂರಿನ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಯಲ್ದೂರು ಹೋಬಳಿ ಸವಿತಾ ಸಮಾಜದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕಲಾವಿದರ ಪುರಸ್ಕಾರದ ಸಮಾರಂಭದಲ್ಲಿ ಮಾತನಾಡುತ್ತಾ, ಸವಿತಾ ಸಮಾಜವು ನಾಗರಿಕರಿಗೆ ಕ್ಷೌರ ವೃತ್ತಿಯನ್ನು ಮಾಡುವುದರ ಮೂಲಕ ಸಮಾಜಕ್ಕೆ ಸುಂದರವಾದ ಕೊಡುಗೆಯನ್ನು ನೀಡುತ್ತಿದೆ. ನಾವು ಪ್ರತಿಯೊಂದು ದೇವಾಲಯದ ಕಾರ್ಯಗಳಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಎಲ್ಲರಿಗಿಂತ ಮುಂಚೂಣ ಯಲ್ಲಿರುವುದೇ ನಮ್ಮ ಸಮಾಜಕ್ಕಿರುವ ಗೌರವವನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎಸ್. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ತಮ್ಮ ಕುಲವೃತ್ತಿಯನ್ನು ಕಲಿಸುವುದರ ಜೊತೆಗೆ ಇಂದಿನ ಆಧುನಿಕ ಯುಗಕ್ಕೆ ಹೊಂದಾಣ ಕೆಯಾಗಲು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬೇಕು ಹಾಗೂ ಗ್ರಾಮದಲ್ಲಿರುವ ಎಲ್ಲಾ ಸಮಾಜಗಳ ಜನರ ಜೊತೆಯಲ್ಲಿ ಹೊಂದಾಣ ಕೆಯಿಂದ ಜೀವನ ನಡೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಕೆ.ಆರ್. ಮುನಿರಾಜು, ಗ್ರಾಮ ಪಂಚಾಯ್ತಿ ಅದ್ಯಕ್ಷ ಸೀತಮ್ಮ ಸೋಮಣ್ಣ, ಸದಸ್ಯರಾದ ನಾಗಭೂಷಣ, ಶ್ರೀನಾಥಸ್ವಾಮಿ, ಹಿರಿಯ ಮುಖಂಡ ಹಾಗೂ ನಿವೃತ್ತ ಶಿಕ್ಷಕ ಜಿ.ವಿ. ನಾರಾಯಣಸ್ವಾಮಿ, ಯಲ್ದೂರು ಹೋಬಳಿ ಸವಿತಾ ಸಮಾಜದ ಅಧ್ಯಕ್ಷರಾದ ಕೆ. ಸೌಂದರ್ರಾಜ್, ಕಾರ್ಯದರ್ಶಿ ಎನ್. ಶ್ರೀರಾಮ್, ಸದಸ್ಯರಾದ ನಂದಕುಮಾರ್, ನಟರಾಜ್ ಹಾಗೂ ಹೋಬಳಿಯ ಸವಿತಾ ಬಂಧುಗಳು ಭಾಗವಹಿಸಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ