ಚಿಕ್ಕಬಳ್ಳಾಪುರ:ರಾಜ್ಯದ ಒಕ್ಕಲಿಗರ ಸಂಘದಲ್ಲಿ ಪ್ರಾಮಾಣಿವಾಗಿ ಸಲ್ಲಿಸಿರುವ ಸೇವೆ ಗುರುತಿಸಲು ಪಾರದರ್ಶಕ ಪ್ರಯತ್ನ-ರಮೇಶ್
ಚಿಕ್ಕಬಳ್ಳಾಪುರ,ಜನವರಿ20: ರಾಜ್ಯದ ಒಕ್ಕಲಿಗರ ಸಂಘದಲ್ಲಿ ಪ್ರಾಮಾಣಿವಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲಾಗಿರುವ ಜವಾಬ್ದಾರಿಯನ್ನು ಎಲ್ಲಾ ಸದಸ್ಯರು ಮತ್ತು ನಿರ್ದೇಶಕರ ಸಹಕಾರದಿಂದ ಸಂಘದ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿಭಾಯಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ನೂತನ ಖಜಾಂಚಿ ಯಲುವಹಳ್ಳಿ ರಮೇಶ್ ಹೇಳಿದರು.
ತಾಲೂಕಿನ ನಂದಿ ಗ್ರಾಮದ ಕಾಂಗ್ರೇಸ್ ಕಾರ್ಯಕರ್ತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು ಈ ಹಿಂದೆ ಸಹ ಒಕ್ಕಲಿಗರ ಸಂಘವನ್ನು ಮಾದರಿಯಾಗಿ ಪರಿವರ್ತನೆ ಮಾಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಸಮಾಜದ ಅಭಿವೃಧ್ಧಿಗಾಗಿ ಪೂರಕವಾಗಿರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಾಗಿ ಹೇಳಿದ ಅವರು ಸಮಾಜದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡುವುದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಸ್ವಾಮಿ,ಮಾಜಿ ಉಪಾಧ್ಯಕ್ಷ ಚಿನ್ನನ್ನ,ಜೆಸಿಬಿ ಮಂಜುನಾಥ್,ಅಂಗಟ್ಟ ಮಂಜುನಾಥ್,ರಾಮಚಂದ್ರಚಾರಿ ಮತ್ತಿತರರು ಉಪಸ್ಥಿತರಿದ್ದರು.