ಕೋಲಾರ,ಆ.15: ಕೊಲಾರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ನಗರಸಭಾ ಸದಸ್ಯ ಷೇಕ್ ಚಾಂದ್ಪಾಷ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಪೌರಾಡಳಿತ ಸಚಿವ ಈಶ್ವರಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರುಗಳಿಗೆ ಮನವಿ ಸಲ್ಲಿಸಿದ್ದಾರೆ.
ಜಿಲೆಯು ತೀವ್ರ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಇಂತಹ ಸಮಯದಲ್ಲಿ ನಾಗರೀಕರಿಗೆ ಕುಡಿಯುವ ನೀರನ್ನು ಪೂರೈಸುವುದು ನಗರಸಭೆಯ ಕರ್ತವ್ಯ. ಬಾಡಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಕಳೆದ ಎರಡೂವರೆ ವರ್ಷ ಜೆ.ಡಿ.ಎಸ್ ನಗರಸಭೆ ಚುಕ್ಕಾಣಿ ಹಿಡಿದಿದ್ದರೂ ರಾಜ್ಯದಲ್ಲಿ ನಮ್ಮ ಕಾಂಗ್ರೇಸ್ ಸರ್ಕಾರವಿದ್ದು, ಅನುದಾನ ಕಾಲಕಾಲಕ್ಕೆ ಬಿಡುಗಡೆಯಾಗುತ್ತಿತ್ತು.
ನಂತರದ ಅವಧಿಗೆ ಕಾಂಗ್ರೇಸ್ನ 8 ಮಂದಿ ಸದಸ್ಯರು ಪಕ್ಷೇತರ ಶಾಸಕ ವರ್ತೂರು ಬಣ ಸದಸ್ಯರ ಸಹಕಾರದೊಂದಿಗೆ ನಗರಸಭೆ ಆಡಳಿತ ಕೈವಶವಾಗಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ, ಕೋಲಾರದಲ್ಲಿ ನಮ್ಮ ಪಕ್ಷದ ಆಡಳಿತವಿದ್ದರೂ ಸಹ ಅಧಿಕಾರಿಗಳ ಅಸಹಕಾರದಿಂದ ಕುಡಿಯುವ ನೀರಿನ ಸಮಸ್ಯೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 13 ತಿಂಗಳಿಂದ ಬಾಡಿಗೆ ಟ್ಯಾಂಕರ್ ಬಿಲ್ ಪಾವತಿಸುವಂತೆ ಕೋರಿ ಮಾಲೀಕರು ಹಲವಾರು ಬಾರಿ ಅರ್ಜಿಗಳನ್ನು ಪ್ರತಿಭಟನೆಗಳನ್ನು ನಡೆಸಿದ್ದು, ಬಾಕಿ ಬಿಲ್ ನೀಡಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಟ್ಯಾಂಕರ್ ಮಾಲೀಕರ ಮೇಲೆ ಎಸ್ಮಾ ಜಾರಿ ಎಂಬ ಅಸ್ತ್ರವನ್ನು ಪ್ರಯೀಗಿಸಿ ನೀರಿನ ಸಮಸ್ಯೆಯನ್ನು ಮತ್ತಷ್ಟು ಕಠಿಣಗೊಳಿಸರುವುದಲ್ಲದೆ ಯಾವುದೇ ಟ್ಯಾಂಕರ್ಗಳು ಬೀದಿಗಿಳಿದರೆ ಸಾರಿಗೆ ಇಲಾಖೆಯವರ ಮೂಲಕ ಸೀಜ್ ಮಾಡಿಸುತ್ತಿದ್ದು, ಸಾರ್ವಜನಿಕರು ನೀರನ್ನು ಖರೀದಿಸಲು ಅಡ್ಡಿಪಡಿಸುತ್ತಿದ್ದು, ಕಾಂಗ್ರೇಸ್ ಸರ್ಕಾರ ಮತ್ತು ಕಾಂಗ್ರೇಸ್ ಆಡಳಿತವಿರುವ ನಗರಸಭೆಯ ಮೇಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂದು ದೂರಿದರು.
ಅಭಿವೃದ್ಧಿ ಕಾಮಗಾರಿಗಳ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಾರೆಂಬ ಆಶಯದೊಂದಿಗೆ ಪರೋಕ್ಷವಾಗಿ ಬೆಂಬಲ ನೀಡಿದ ನಗರಸಭಾ ಸದಸ್ಯರುಗಳಿಗೆ ಮತ್ತು ನಮ್ಮ ಪಕ್ಷ್ ಕೆಲವು ಸದಸ್ಯರು ಬೇಸರಗೊಂಡಿರುವುದು ವಿರೋಧ ಪಕ್ಷಕ್ಕೆ ಅವಿಶ್ವಾತ ನಿರ್ಣಯ ಮಂಡಿಸುವ ಹಂತಕ್ಕೆ ಬಂದಿದೆ. ನಗರಸಭೆಯಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ( ಉದಾಳ ಎಸ್ಮಾ ಜಾರಿ ಬಗ್ಗೆ ಚರ್ಚಿಸಿರುವುದಿಲ್ಲ) ಹಲವಾರು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಮುಜುಗರಕ್ಕೊಳಗಾಗಿದೆ. ಕಳೆದ ಅವಧಿಯಲ್ಲಿ ಜೆ.ಡಿ.ಎಸ್ ಪಕ್ಷ ಉತ್ತಮವಾಗಿ ಆಡಳಿತ ನೀಡಿದೆ ಎಂದು ಸಾರ್ವಜನಿಕರು ವಿಮರ್ಶೇ ಮಾಡಿಕೊಳ್ಳುವ ಹಂತಕ್ಕೆ ಬಂದಿರುವುದು ವಿಪರ್ಯಾಸ.
ನಮ್ಮದೇ ಸರ್ಕಾರ ನಮ್ಮದೇ ನಗರಸಭೆಯಲ್ಲಿ ಆಡಳಿತವಿದ್ದರೂ ಆಡಳಿತ ಸುಧಾರಣೆಗೊಳಿಸಲು ಅಧಿಕಾರಿಗಳ(ಜಿಲ್ಲಾಧಿಕಾರಿಗಳು ಸೇರಿ) ಮತ್ತು ನಗರಸಭೆ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ನಗರಸಭೆ ಆಡಳಿತ ಕೈತಪ್ಪಿ ಹೋಗುವ ಸಂದರ್ಭ ಹೆಚ್ಚಾಗಿರುವುದರಿಂದ ತುರ್ತಾಗಿ ಕ್ರಮ ಕೈಗೊಳ್ಳುವಂತೆ ನಗರಸಭಾ ಸದಸ್ಯ ಷೇಕ್ ಚಾಂದ್ಪಾಷ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಷೇಕ್ ಚಾಂದ್ಪಾಷ 9740202985
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ