ಕೋಲಾರ ಜ.17 : 28ನೇ ರಾಷ್ಟ್ರೀಯ ರಸ್ತೆ ಸುರಕ್ಷತ ಸಪ್ತಾಹ ಅಂಗವಾಗಿ ಕೋಲಾರ ನಗರದ ಟಮಕದ ಸುಗುಣ ವಿದ್ಯಾಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಎ.ಆರ್.ಎಸ್.ಐ. ಟೈಗರ್ ವೆಂಕಟೇಶ್ರವರು ಮಾತನಾಡಿ ಜೀವವು ಅತ್ಯಮೂಲ್ಯವಾದುದು ಮನೆ ಬಿಟ್ಟೊಡನೆ ಮತ್ತು ಮನೆ ಸೇರುವವರೆಗೂ ಸಂಚಾರಿ ನಿಯಮಗಳನ್ನು ಸದಾ ಪಾಲನೆ ಮಾಡಬೇಕು. ರೋಡ್ ಸೈನ್ಸ್, ಮಾಂಡೋಟರಿ ಸೈನ್ಸ್, ಕಾಷ್ನರಿ ಸೈನ್ಸ್, ಕಾಷ್ನರಿ ಇನ್ಪಮೆಟರಿ ಇದರ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ, ನಗರದಲ್ಲಿ ಜೀಬ್ರಾ ಕ್ರಾಸಿಂಗ್ ಮತ್ತು ಪುಟ್ಬಾತ್ನ್ನು ಪಾದಚಾರಿಗಳು ಬಳಸುವ ಬಗ್ಗೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಸಬಾರದು ಎಂದು ಅಲ್ಲದೆ ಜೀವ ಉಳಿಸಿಕೊಳ್ಳುವ ಸಲುವಾಗಿ ಹಾಗೂ ಇತರರ ಜೀವ ಉಳಿಸುವ ಸಲುವಾಗಿ ವಾಹನ ಸವಾರರೆ ಅಲ್ಲದೆ ಪ್ರತಿಯೊಬ್ಬರಿಗೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.
ಎ.ಎಸ್.ಐ. ನಾರಾಯಣಪ್ಪ ರವರು ಮಾತನಾಡಿ ವಾಹನ ಚಾಲನೆ ಮಾಡುವಾಗ ಡಿ.ಎಲ್., ಇನ್ಸುರೆಡನ್ಸ್, ಆರ್.ಸಿ., ಎಮಷನ್ ಟೆಸ್ಟ್ ಪತ್ರಗಳನ್ನು ಹೊಂದಿರಬೇಕು. ವಾಹನಕ್ಕೆ ಇನ್ಸುರೆನ್ಸ್ ಇದ್ದರೆ ಅಪಘಾತ, ಕಳುವು, ಸಂದರ್ಭದಲ್ಲಿ ಬಹಳಷ್ಟು ನೆರವಾಗುತ್ತದೆ ಎಂದರು.
ಮುಖ್ಯ ಪೇದೆಗಳಾದ ಗುಣಶೇಖರ್, ನಾರಾಯಣಸ್ವಾಮಿ, ಸುಗುಣ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀದೇವಿ ಮತ್ತು ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಇದೇ ದಿನ ಮಹಾತ್ಮಗಾಂದಿ ವನದಿಂದ ಇ.ಟಿ.ಸಿ.ಎಂ. ವೃತ್ತ ಮಾರ್ಗವಾಗಿ ಕಾಲೇಜು ವತ್ತ, ಚಂಪಕ್ ವೃತ್ತ ಮತ್ತೆ ಗಾಂಧಿವನಕ್ಕೆ ಬಂದು ಮೆರವಣ ಗೆ ಮುಖಾಂತರ ರಸ್ತೆ ಸಪ್ತಾಹ ಅಂಗವಾಗಿ ಜನ ಜಾಗೃತಿ ಮೂಡಿಸಲಾಯಿತು. ಈ ಮೆರವಣೆಗೆಗೆ ಡಿ.ವೈ.ಎಸ್.ಪಿ. ಅಬ್ದುಲ್ ಸತ್ತಾರ್ ರವರು ಚಾಲನೆ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ರವರು, ಸಂಚಾರಿ ಠಾಣೆಯ ಪಿ.ಎಸ್.ಐ. ಜಗದೀಶ್ ರವರು,. ಟೌನ್ ಪಿ.ಎಸ್.ಐ. ಪ್ರದೀಪ್, ಮುಖ್ಯಪೇದೆ ಶಿವಪ್ಪ, ಪೇದೆ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.