ಕೋಲಾರ: ಸೀತಿ ಗ್ರಾ.ಪಂ ನಲ್ಲಿ ಬಹಿರಂಗ ಹರಾಜು

Source: shabbir, | By Arshad Koppa | Published on 15th November 2017, 8:28 AM | State News |

ಕೋಲಾರ, ಅಕ್ಟೋಬರ್ 14 :ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಸೀತಿ ಗ್ರಾಮದ ಶ್ರೀ ಪತೇಶ್ವರ ಮತ್ತು ಬೈರವೇಶ್ವರಸ್ವಾಮಿ ದೇವಾಲಯದ ಭಕ್ತಾಧಿಗಳ ಪಾದರಕ್ಷೆ ಕಾಯುವ ಕೆಲಸಕ್ಕೆ 2018ನೇ ಸಾಲಿನ ದಿನಾಂಕ: 01-01-2018 ರಿಂದ  b31-12-2018 ರ ವರೆಗೆ ಒಂದು ವರ್ಷ ಅವಧಿಗೆ ರೂಡಿಸಿಕೊಳ್ಳುವ ಹಕ್ಕನ್ನು ವಹಿಸುವ  ಷರತ್ತು ಬದ್ದ ಬಹಿರಂಗ ಹರಾಜನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರ ಸಮಕ್ಷಮದಲ್ಲಿ 
ದಿನಾಂಕ: 30-11-2017 ರಂದು ಬೆಳಿಗ್ಗೆ 11 ಗಂಟೆಗೆ ಸೀತಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಸಲಾಗುವುದು.
    ಹರಾಜಿನಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಒಂದು ಸಾವಿರ ರೂಗಳ ಮುಂಗಡ ಠೇವಣ  ಇಡಬೇಕು. ಹರಾಜು ಮುಗಿದ ಕೂಡಲೇ ಹರಾಜಿನ ಸಂಪೂರ್ಣ ಮೊಬಲಗನ್ನು ಸವಾಲುದಾರರು ಸ್ಥಳದಲ್ಲೇ ಪಾವತಿ ಮಾಡಿ ರಸೀದಿ ಪಡೆಯಬೇಕು. ಹರಾಜು ಮಂಜೂರಾತಿಯು ಜಿಲ್ಲಾಧಿಕಾರಿಗಳ ಅನುಮೋದನೆಗೆ ಒಳಪಟ್ಟಿರುತ್ತದೆ.  ಹರಾಜಿನ ಮೊತ್ತ ಕಡಿಮೆ ಎನಿಸಿದರೆ ಪುನಃ ಹರಾಜು ನಡೆಸಲಾಗುವುದು. ಹರಾಜು ಮಂಜೂರಾಗುವವರೆಗೆ ಹರಾಜುದಾರರು ಚಪ್ಪಲಿ ಕಾಯುವ ಶುಲ್ಕವನ್ನು ವಸೂಲಿ ಮಾಡತಕ್ಕದ್ದಲ್ಲ. ಹರಾಜುದರರು ಒಂದು ಜೊತೆ ಚಪ್ಪಲಿಗೆ ಎರಡು ರೂ ರಂತೆ ರಶೀದಿ ಮುದ್ರಿಸಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ರಶೀದಿ ಪುಸ್ತಕವನ್ನು ದೃಡೀಕರಿಸಿಕೊಂಡ ನಂತರ ವಿತರಿಸಬೇಕು. ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ವಸೂಲಿ ಮಾಡಬಾರದು. ಈ ಸಂಬಂಧ ಭಕ್ತಾಧಿಗಳಿಂದ ದೂರುಗಳು ಬಂದಲ್ಲಿ ಹರಾಜನ್ನು ರದ್ದುಗೊಳಿಸಲಾಗುವುದು. ಹರಾಜನ್ನು ಯಾವುದೇ ಕಾರಣಕ್ಕೂ ಉಪ-ಗುತ್ತಿಗೆಗೆ ನೀಡತಕ್ಕದ್ದಲ್ಲ ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...