ಕೋಲಾರ ಜು 13: ಶಾಶ್ವತ ನೀರಾವರಿ ಹೋರಾಟ ಸಮಿತಿಯು ಇಂದು ಹಳ್ಳಿಗಳಿಗೆ ತೆರಳಿ ಜನರಲ್ಲಿ ನೀರಿನ ಸಮಸ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಂಚಾಲಕರು ಅಹಿಂದ ಮಂಜುನಾಥ್ ಮಾತನಾಡಿ ಶಾಶ್ವತ ನಿರಾವರಿ ಹೋರಾಟವು ಒಂದು ವರ್ಷಗಳ ಸುಧೀರ್ಘವದಿ ಹೋರಾಟ ಮಾಡಿ ಕರ್ನಾಟಕದಾದ್ಯಂತ ಆದೋಲ ನಡೆಸಿ ಜನರಲ್ಲಿ ಪ್ರಸ್ತುತ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಅಗತ್ಯ ತಕ್ಕಂತೆ ಬಳಸಿ ಹಾಗೂ ಮುಂದಿನ ಹೋರಾಟಗಳಲ್ಲಿ ಮನೆಗೊಬ್ಬರಂತೆ ಭಾಗವಹಿಸಲು ಮನವಿ ಮಾಡಿದರು ಕೆ.ಸಿ. ವ್ಯಾಲಿ, ಯರಗೋಳ್ ಯೋಜನೆಯ ಕಾಮಗಾರಿಗಳು ವಿಳಂಭವಾಗಂದತೆ ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕಾಮಗಾರಿಗಳನ್ನು ಕಾಲಕಾಲಕ್ಕೂ ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ಕೋಲಾರ ಜಿಲ್ಲೆಯ ಜನತೆಗೆ ನೀರು ಪೂರೈಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಸಂಚಾಲಕ ಕುರುಬರಪೇಟೆ ವೆಂಕಟೇಶ್ ಮಾತನಾಡಿ ಕೆ.ಸಿ. ವ್ಯಾಲಿ ನೀರು ಪೂರೈಸುವ ಕಾಮಗಾರಿಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಇದೇ ಜುಲೈ 15ರಂದು ಎ.ಹೆಚ್.ಎ.ಐ. ಮತ್ತು ಲ್ಯಾಂಕೋ ಕಂಪನಿಗಳ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದ್ದೇವು. ಆದರೆ ಕೋಲಾರ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕೆ.ಸಿ. ವ್ಯಾಲಿ ಕಾಮಗಾರಿಗೆ ಯಾವುದೇ ತೊಂದರೆ ಇಲ್ಲವೆಂದು ತಿಳಿಸಿದ ಹಿನ್ನಲೆಯಲ್ಲಿ ನಾವು ಧರಣ ಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಮೂರ್ತಿ, ಹೋಟೆಲ್ ಶಂಕರಪ್ಪ, ಜಾನಕಿರಾಮ್,ಮುನಿರಾಜು, ಚರಣ್, ನವೀನ್, ವಿದ್ಯಾಶಂಕರ್ ಮುಂತಾದವರು ಉಪಸ್ಥಿತರಿದ್ದರು.
(ಅಹಿಂದ ಮಂಜುನಾಥ್)
ನೀರಾವರಿ ಹೋರಾಟ ಸಮಿತಿ, ಕೋಲಾರ ಜಿಲ್ಲೆ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.