ಕೋಲಾರ ಜು 16: ಜಿಲ್ಲೆಯ ಜನರ ನೀರಿನ ಬವಣೆ ನೀರಿಸಲು ಮತ್ತು ರೈತನ ನೆರವಿಗಾಗಿ ಒಂದು ವರ್ಷದ ಕಾಲ ನೀರಾವರಿ ಹೋರಾಟ ಮಾಡಿದ ಹೋರಾಟದ ವೇದಿಕೆಯ ಹಿಂಬದಿಯ ಬ್ಯಾನರ್ನ್ನು ಯಾರೋ ಕಡಿಗೇಡಿಗಳು ಹರಿದು ಹಾಕಿರುವುದು ನೀರಾವರಿ ಹೋರಾಟಗಾರರಿಗೆ ನೋವು ಉಂಟುಮಾಡಿದೆ.
ವಾರಗಟ್ಟಲೆ ಕಾದು ಕುಳಿತರೂ ನಲ್ಲಿಗಳಲ್ಲಿ ನೀರಿಲ್ಲ, ಬಿಂದಿಗೆ ಒಂದಕ್ಕೆ 10 ರೂಪಾಯಿ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ದುಸ್ಥಿತಿಯಲ್ಲಿ ನಾವು ಇದ್ದೇವೆ. ಈ ಪರಿಸ್ಥಿತಿಯಲ್ಲಿ ಹೋರಾಟಕ್ಕೆ ಕೆಲವು ಬಂದರೂ ಇನ್ನೂ ಕೆಲವರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆಗೆ ನೀರೇ ಬೇಡವೆನ್ನುವ ಮಹಾನುಬಾವರು ಈ ಜಿಲ್ಲೆಯಲ್ಲಿದ್ದಾರೆ ಎಂದರೆ ಇದಕ್ಕಿಂತ ಬೇಸರದ ಸಂಗತಿ ಬೇರೊಂದಿಲ್ಲ.
ಈ ವಿಚಾರವಾಗಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಇಂತಹ ಕೀಳು ಮಟ್ಟದ ಕೆಲಸ ಮಾಡಿರುವವರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಕೋಲಾರ ಜಿಲ್ಲಾ ನೀರಾವರಿ ಹೋರಾಟ ಸಮಿತಿಯು ಒತ್ತಾಯಿಸುತ್ತದೆ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ