ಕೋಲಾರ,ಜು.6: ಬಿಜಾಪುರ ತಾಲೂಕಿನ ಬಾಹುಬಲೇಶ್ವರ ತಾಲೂಕಿನಲ್ಲಿ ದಿನಾಂಕ 29-6-2017 ರಂದು ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕೋಲಾರ ನಗರದ ಕಿಲಾರಿಪೇಟೆಯ ನಿವಾಸಿ ಕೆ.ಎನ್.ವೆಂಕಟೇಶ್ ರವರ ಸುಪುತ್ರನಾದ ಕೆ.ವಿ.ಕಿಶೋರ್ ಧಾರವಾಡದ ಸದಾಂ ರವರ ವಿರುದ್ಧ 90 ಕೆ.ಜಿ.ಯ ತೂಕದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಗದೆಯನ್ನು ಪಡೆದು ಜಯಶೀಲರಾಗಿದ್ದಾರೆ.
ಮಠಪತಿ ಶಿಷ್ಯನಾದ ಕೆ.ವಿ.ಕಿಶೋರ್ ಈಗಾಗಲೇ ಹಲವಾರು ಪ್ರಶಸ್ತಿಗಳು ಪಡೆದಿದ್ದು, ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ