ಕೋಲಾರ: ಕೆ.ಜಿ.ಎಫ್‍ನಲ್ಲಿ ಸೈನೈಡ್ ದೂಳಿನಿಂದ ಮುಕ್ತಿಗಾಗಿ 25 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು

Source: shabbir | By Arshad Koppa | Published on 8th August 2017, 11:27 PM | State News | Guest Editorial |

ಕೋಲಾರ, ಆಗಸ್ಟ್ 08:ಕೆ.ಜಿ.ಎಫ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸುಮಾರು 120 ವರ್ಷಗಳ ಹಳೆಯ ಸೈನೈಡ್ ದಿಬ್ಬಗಳ ದೂಳಿನಿಂದ ಕೊನೆಗೂ ಮುಕ್ತಿ ಸಿಗುವ ನೂತನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಕಾರ್ಯರೂಪಕ್ಕೆ ತಂದಿದೆ. 
ಪುಟ್ಟ ಪುಟ್ಟ ಸೈನೈಡ್ ಗುಡ್ಡಗಳ ಮೇಲಿಂದ ಜೂನ್ ಹಾಗೂ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಬಿರುಸಾದ ಗಾಳಿಯಿಂದ ಹರಡುತ್ತಿದ್ದ ಸೈನೈಡ್ ದೂಳು ಕೆ.ಜಿ.ಎಫ್ ಹಾಗೂ ಕೋಲಾರ ಪ್ರದೇಶ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಆಂದ್ರ ಹಾಗೂ ತಮಿಳು ನಾಡು ಕೆಲವು ಪ್ರದೇಶಗಳಿಗೂ ಸಹ ಹರಡಿ ಹಲವಾರು ಉಸಿರಾಟ ಸಂಬಂಧಿತ ರೋಗಗಳಿಗೆ ಕಾಣವಾಗಿತ್ತು. 
ಇಡೀ ಊರಿಗೆ ಊರೇ ದೂಳಿನಿಂದ ಆವೃತವಾಗುತ್ತಿತ್ತು. ಇದನ್ನು ತಡೆಯಲು ಇತ್ತೀಚೆಗೆ ಜಿಲ್ಲಾಡಳಿತ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕೆ.ಜಿ.ಎಫ್‍ನ ನ್ಯಾಯಾಂಗ ಅಧಿಕಾರಿಗಳು ಸೇರಿ ಈ ಪ್ರದೇಶವನ್ನು ದೂಳು ಮುಕ್ತಗೊಳಿಸಲು ವಿವಿಧ ಸಸಿಗಳ ನೆಡು ತೋಪುಗಳನ್ನು ಸೃಷ್ಠಿಸಲು ನಿರ್ಧರಿಸಿದರು. ಒಟ್ಟು 40 ಹೆಕ್ಟೇರ್ ಪ್ರದೇಶದ ಈ ದಿಬ್ಬಗಳ  25 ಹೆಕ್ಟೇರ್ ಪ್ರದೇಶದಲ್ಲಿ 10 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. 
ಕತ್ತಾಳೆ, ಹೊಂಗೆ, ಹಮಟ, ಕುಸ್ ಹುಲ್ಲು ಮುಂತಾದ ಸಸಿಗಳನ್ನು ಈ ನೆಡು ತೋಪುಗಳಲ್ಲಿ ನೆಡಲಾಗಿದ್ದು ಸುಮಾರು ಅರ್ಧದಷ್ಟು ಪ್ರದೇಶವನ್ನು ಇದು ಆವರಿಸಿಕೊಳ್ಳಲಿದೆ.  ಈ ನೆಡು ತೋಪುಗಳ ವೀಕ್ಷಣೆ ಹಾಗೂ ಕಾರ್ಯ ಪರಿಶೀಲನೆಗೆ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಹಾಗೂ ಕೆ.ಜಿ.ಎಫ್‍ನ ನ್ಯಾಯಧೀಶರು ಭೇಟಿ ನೀಡಿದರು. 
ಸುಮಾರು 20 ಟನ್ ಕಾಂಪೋಸ್ಟ್ ಗೊಬ್ಬರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ತರಿಸಿಕೊಳ್ಳಲಾಗಿದ್ದು ಈ ನೆಡುತೋಪಿಗೆ ಅದನ್ನು ಬಳಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ರಾವ್ ಅವರು ತಿಳಿಸಿದರು. 
ಜಿಲ್ಲಾ ನ್ಯಾಯಾಧೀಶರಾದ ಎಂ.ಜಗದೀಶ್ವರ, ನ್ಯಾಯಾಧೀಶರುಗಳಾದ ದಯಾನಂದ್, ರವಿಕುಮಾರ್ ಹಾಗೂ ಲೋಕೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...