ಕೋಲಾರ, ಜುಲೈ 31:ತೆರಿಗೆ ಸಂಗ್ರಹದಲ್ಲಿ ನಡೆಯುವಂತ ಅಕ್ರಮಗಳನ್ನು ತಡೆಯಲು ಜಿಎಸ್ಟಿ ಕಾಯ್ದೆಯ ಕ್ರಾಂತಿಕಾರಿ ವ್ಯವಸ್ಥೆಯಿಂದ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಬಿ ಬಿ ಕಾವೇರಿ ಅವರು ಅಭಿಪ್ರಾಯ ಪಟ್ಟರು.
ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸರ್ಕಾರವು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು ಜಾರಿಗೆ ತಂದಿದ್ದು, ತೆರಿಗೆಯನ್ನು ಕಟಾಯಿಸುವ ಬಗ್ಗೆ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಎದುರಾಗುವ ಸವಾಲುಗಳು ಹಾಗೂ ಅವುಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಯು ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಯಾವುದೇ ಸಣ್ಣ ಅಥವಾ ದೊಡ್ಡ ಸಂದೇಹಗಳಿದ್ದರೂ ನಿಸ್ಸಂಕೋಚವಾಗಿ ಕೇಳಿ ಪರಿಹಾರ ಕಂಡುಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ವಾಣ ಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀ ಅಶೋಕ್ ಅವರು ಪಿ ಪಿ ಟಿ ಮೂಲಕ ಪ್ರಾತ್ಯಕ್ಷಿಕೆ ನೀಡಿ ಜಿ ಎಸ್ ಟಿ ಕಾಯ್ದೆಯ ನಿಯಮಗಳು, ನೋಂದಣ ಸೇರಿದಂತೆ ತೆರಿಗೆ ಕಟಾಯಿಸುವ ಹಾಗೂ ಪಾವತಿ ಮಾಡುವ ವಿಧಾನಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಶ್ರೀ ಅಶೋಕ್ ಅವರು ಅಧಿಕಾರಿಗಳು ಕೇಳಿದಂತ ಹಲವಾರು ವಾಸ್ತವ ಸಮಸ್ಯೆಗಳನ್ನು ಕಾಯಾಗಾರದಲ್ಲಿ ಚರ್ಚಿಸಿ ಅವುಗಳಿಗೆ ಪರಿಹಾರ ನೀಡಿದರು. ಜಿಎಸ್ಟಿಯಡಿ ಪ್ರತಿಯೊಂದು ವ್ಯವಹಾರವು ತೆರಿಗೆಗೆ ಒಳಪಡುತ್ತದೆ ಎಂದ ಅವರು ಪೂರೈಕೆ ಹಾಗೂ ಸೇವೆಗಳಿಗೂ ಜಿಎಸ್ಟಿಯಡಿ ಟಿ.ಡಿ.ಎಸ್ ಪಾವತಿಸುವುದು ಕಡ್ಡಾಯ ಎಂದು ತಿಳಿಸಿದರು.