ಕೋಲಾರ ಏ.14: ಡಾ|| ಬಿ.ಆರ್. ಅಂಬೇಡ್ಕರ್ ರವರ 126ನೇ ಜಯಂತೋತ್ಸವದ ಸಂದರ್ಭದಲ್ಲಿ ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಡಾ|| ಡಿ.ಕೆ. ರಮೇಶ್ರವರು ಮಾಲಾರ್ಪಣೆ ಮಾಡಿದರು.
ನಂತರ ಡಾ|| ಡಿ.ಕೆ. ರಮೇಶ್ ನಮ್ಮ ನಡೆ ಕೂಡಿ ಬಾಳೋಣ ಕಡೆ ಕಾರ್ಯಕ್ರಮದಲ್ಲಿ ದಲಿತ ಮುಖಂಡರೊಂದಿಗೆ ತಿಂಡಿ ಸಮಿಯುತ್ತಾ ಮಾತನಾಡಿದ ಅವರು ದೇಶಕ್ಕೆ ಸಂವಿಧಾನ ರಚಿಸಿದಂತಹ ಮಹಾನ್ ಪುರುಷ ಮಾನವತಾ ವಾದಿ, ಯುಗ ಪುರುಷ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ರವರು ಈ ದೇಶದಲ್ಲಿ ಸಮಾನತೆ ಸಾರಬೇಕೆಂಬ ಉದ್ದೇಶದಿಂದಲೇ ಎಲ್ಲರಿಗೂ ಸಮನಾಗಿ ಸಂವಿಧಾನದಲ್ಲಿ ಮೀಸಲಾತಿಯನ್ನು ಮಾಡಿದ ಪರಿಣಾಮ ಇಂದು ಎಲ್ಲರೂ ಅಧಿಕಾರ ಪಡೆಯುವಂತಾಗಿದೆ ರಾಷ್ಟ್ರ ಮತ್ತು ರಾಜ್ಯದಲ್ಲಿ ದಲಿತರಿಗೆ ರಾಷ್ಟ್ರಪತಿ, ರಾಜ್ಯಪಾಲರಂತಹ ಉನ್ನತ ಹುದ್ದೆಗಳಲ್ಲಿಯೂ ಅಧಿಕಾರ ಸಿಕ್ಕಿದಾಗ ಮಾತ್ರ ಅಂಬೇಡ್ಕರ್ ಆಶಯ ನೆರವೇರಿದಂತೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪಿ.ವಿ.ಸಿ. ಕೃಷ್ಣಪ್ಪ, ಡಿ.ಪಿ.ಎಸ್. ಮುನಿರಾಜು, ನರಸಾಪುರ ನಾರಾಯಣಸ್ವಾಮಿ, ಮಂಗಳಮುಖಿಯರ ಸಂಘದ ಅಧ್ಯಕ್ಷೆ ಅಶ್ವಿನಿ ರಾಜನ್, ಮಾರ್ಜೆನಹಳ್ಳಿ ಮುನಿರಾಜು, ನೀರಾವರಿ ಸಂಚಾಲಕ ವಿ.ಕೆ.ರಾಜೇಶ್, ಕಲ್ವಮಂಜಲಿ ಶಿವಣ್ಣ, ಕವಿ ನಾರಾಯಣಸ್ವಾಮಿ, ಖಾದ್ರಿಪುರ ಬಾಬು ಮುಂತಾದವರು ಉಪಸ್ಥಿತರಿದ್ದರು.