ಕೋಲಾರ ಜು.22: ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮ ವರ್ಷಾಚರಣೆಯ ಪ್ರಯುಕ್ತ ಬಿ.ಜೆ.ಪಿ. ನಗರ ಘಟಕದಿಂದ ಹಮ್ಮಿಕೊಂಡಿದ್ದ ಮನೆ ಮನೆ ಬೇಟಿ ಕಾರ್ಯಕ್ರಮವನ್ನು ಗೌರಿಪೇಟೆಯ 10ನೇ ವಾರ್ಡ್ನಲ್ಲಿ ನಡೆಸಲಾಯಿತು.
ಪ್ರತಿ ಮನೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ವೈಪಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ್ನು ಕರ್ನಾಟಕದಿಂದ ಮುಕ್ತ ಮಾಡುವ ಏಕೈಕ ಉದ್ದೇಶದಿಂದ ನಗರದ ಎಲ್ಲಾ ಭೂತ್ಗಳಲ್ಲಿ ಮನೆ ಮೆನೆ ಪ್ರಚಾರ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಗೇರಿ ನಾರಾಯಣಸ್ವಾಮಿ ಮಾತನಾಡಿ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ರೀತಿಯಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸರ್ಕಾರ ಶಾಲಾ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಿ ಒಂದು ಜಾತಿಯ ಮಕ್ಕಳಿಗೆ ಮಾತ್ರ ಬಸ್ ಪಾಸ್ ನೀಡಿ, ಮಕ್ಕಳಿಗೆ ಮೊಟ್ಟೆ ವಿತರಿಸುವಲ್ಲಿ ತಾರತಮ್ಯ ಮಾಡುತ್ತಿರುವುದು ಮಕ್ಕಳಲ್ಲಿ ವಿಷ ಬೀಜ ಬಿತ್ತಿ ಸಮಾಜಕ್ಕೆ ಕಂಡಕವಾಗುತ್ತಿದೆ. ಅದೇ ರೀತಿ ಜಗಜ್ಯೋತಿ ಬಸವಣ್ಣವನರ ವಿಚಾರ ಧಾರೆಯನ್ನು ಧರ್ಮದ ಅಡಿಯಲ್ಲಿ ಒಡೆದು ಛಿದ್ರ ಮಾಡಿ ವೀರಶೈವ ಜನಾಂಗದಲ್ಲಿ ಒಡಕು ಮಾಡುತ್ತಿರುವ ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಯುವ ಮೋಚಾ ನಗರಾಧ್ಯಕ್ಷರಾದ ಬಾಲಾಜಿ ಮಾತನಾಡಿ ಯುವ ಜನತೆ ನರೇಂದ್ರ ಮೋದಿಯವರ ಎಲ್ಲಾ ವಿಷಯಗಳಲ್ಲಿ ಮುಂಚೂಣಿಯಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಕೈಜೋಡಿಸುವಲ್ಲಿ ಸಹಕಾರಿಯಾಗುತ್ತಿರುವುದು ಈ ಭಾರತ ದೇಶಕ್ಕೆ ಯುವ ಜನತೆಯ ಶಕ್ತಿ ಏನೆಂಬುದನ್ನು ತೋರಿಸುತ್ತಿದ್ದಾರೆ ಎಂದರು.
ಈ ಪ್ರಚಾರದಲ್ಲಿ ಗದ್ದೆಕಣ್ಣೂರು ನವೀನ್, ಯುವ ಮೋರ್ಚಾ ರಾಜ್ಯ ಕಾರ್ಯಕಾರಣ ಸದಸ್ಯ ನರೇಶ್, ಜಿಲ್ಲಾ ಕಾರ್ಯದರ್ಶಿ ಯಲ್ದೂರು ಪದ್ಮನಾಬ್, ಗೌರಿಪೇಟೆಯ ಡಿಟಿಪಿ ಸೆಂಟರ್ನ ವಿಶ್ವೇಶ್ವರ ವಿಶ್ವಕರ್ಮ, ನರ್ಮದಾ ಪ್ರಿಂಟರ್ಸ್ನ ಪಾರ್ಥಸಾರಥಿ ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.