ಕೋಲಾರ:``ಚಿಲಿಪಿಲಿ’’ ಮಕ್ಕಳ ಮೇಳ ಬೇಸಿಗೆ ಶಿಬಿರ-2017 ಮುಕ್ತಾಯ ಸಮಾರಂಭ
ಕೋಲಾರ, ಏಪ್ರಿಲ್ 24:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಜಿಕಲ್ಲಹಳ್ಳಿ ಕೋಲಾರ ತಾಲ್ಲೂಕು ಹಾಗೂ ಇಂಚರ ಕೋಲಾರ ಇವರುಗಳ ಸಂಯುಕ್ತಾಶ್ರಯದಲ್ಲಿ ವತಿಯಿಂದ ``ಚಿಲಿಪಿಲಿ’’ ಮಕ್ಕಳ ಮೇಳ ಬೇಸಿಗೆ ಶಿಬಿರ-2017 ಮುಕ್ತಾಯ ಸಮಾರಂಭ ಹಾಗೂ ಸಾಂಸ್ಕøತಿಕ ಉತ್ಸವವನ್ನು ದಿನಾಂಕ: 25-04-2017 ರಂದು ಸಂಜೆ 6.00 ಗಂಟೆಗೆ ಸ.ಹಿ.ಪ್ರಾ.ಶಾಲಾ ಆವರಣ, ಖಾಜಿಕಲ್ಲಹಳ್ಳಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಆರ್.ವರ್ತೂರು ಪ್ರಕಾಶ್ ರವರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸೂಲೂರು ಎಂ.ಆಂಜಿನಪ್ಪನವರು, ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಬೆಗ್ಲಿ ಸೂರ್ಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ರೂಪಶ್ರೀ ಮಂಜುನಾಥ್, ಶ್ರೀ ಸಿ.ಎನ್.ಅರುಣ್ ಪ್ರಸಾದ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ರತ್ನಮ್ಮ ನಂಜುಂಡಗೌಡ, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶೈಲಾ ರಾಜ್, ಖಾಜಿಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಆರ್.ರಾಜಣ್ಣ, ಶ್ರೀ ನಟರಾಜ್, ಸಾ.ಶಿ.ಇ. ಉಪ ನಿರ್ದೇಶಕ ಡಿ.ವಿ.ಕಾಂತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಮ ಶಿಂಧೆ, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ, ನಗರಸಭೆ ನಿವೃತ್ತ ಪೌರಾಯುಕ್ತ ಜಗದೀಶ, ಎಸ್.ಎಫ್.ಎಸ್.ಸಿ ಅಧ್ಯಕ್ಷ ಮುನಿರಾಜು, ಖಾಜಿಕಲ್ಲಹಳ್ಳಿ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕ ಕೋಟೇಶ್ವರ ರಾವ್ ಭಾಗವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಉಪನ್ಯಾಸಕ ಡಾ.ಜಿ.ಶಿವಪ್ಪ ಅರಿವು ಇವರು ವಿಶೇಷವಾಗಿ ಮಾತನಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಡಾ. ಇಂಚರ ನಾರಾಯಣಸ್ವಾಮಿ ನಿದೇಶನದ `ದಿಬ್ಬದ ಮರಗಳು’ ನಾಟಕ ವಿಶೇಷ ಕಾರ್ಯಕ್ರಮ ನಡೆಯಲಿದೆ.