ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ, ಕುರುಗಲï ಗ್ರಾಮದ ಫ್ರೌಢಶಾಲೆಯ ಸಭಾಂಗಣದಲ್ಲಿ ತಾಲ್ಲೂಕು ಕಛೇರಿ, ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಮತ್ತು ಪಾರಮಿತ ಅಧ್ಯಾಯನ ಕೇಂದ್ರದ ಸಂಯುಕ್ತಾಶ್ರಯಲ್ಲಿ 2016-2017 ಸಾಲಿನ ಪರಿಶಿಷ್ಟ ಜಾತಿ, ಪಂಗಡ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪೃಶ್ಯತಾ ನಿವಾರಣೆಯ ಬಗ್ಗೆ ಕಾರ್ಯಗಾರ, ವಿಚಾರ ಸಂಕೀರಣ, ಮತ್ತು ಬೀದಿ ನಾಟಕ ಕಾರ್ಯಕ್ರಮವನ್ನು ಶಾಲೆಯ ಅಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಕೆಂಪಣ್ಣ ಉದ್ಘಾಟಿಸಿ ಮಾತ್ನಾಡಿ ಸಮಾಜದಲ್ಲಿ ವಿದ್ಯಾರ್ಥಿ ಯುವಜನತೆ ಅಸ್ಪೃಶ್ಯತೆ, ನಶಿಸಬೇಕಾದರೆ ವಿದಾರ್ಥಿಗಳಿಗೆ ಜಾಗೃತಿ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ..
ಪರಿಶಿಷ್ಟ ಜಾತಿ, ಪಂಗಡ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸರ್ಕಾರ ನಡೆಸುವ ಸಭೆಗಳಿಗೆ ಮೇಲ್ಜಾತಿಯವರನ್ನು ಕರೆದು ಅರಿವು ಮೂಡಿಸಬೇಕು ಮತ್ತು ಪ್ರತಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಯುವಜನತೆ ಕರೆ ನೀಡಿದರು.
ವಿಚಾರವಾದಿ ಗಂಗಾಧರ್ ಮೂರ್ತಿ ವಿಚಾರ ಮಂಡಿಸುತ್ತಾ ಅಸ್ಪರ್ಶ್ಯತೆ ಆಚರಣೆ ಕಾನೂನು ರೀತಿಯ ಅಪರಾಧವಾಗಿದೆ. ಪ್ರತಿ ಹಳ್ಳಿಯಲ್ಲೂ ಅಸ್ಪರ್ಶ್ಯತೆತೆ ಜೀವಂತವಾಗಿರುವುದು ಮುಂದುವರೆದ ಸಮಾಜ ತಲೆ ತಗ್ಗಿಸಬೇಕಾಗಿದೆ ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರು ಇನ್ನೂ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುತ್ತಿಲ್ಲ. ಅದರಿಂದ ಅಂಬೇಡ್ಕರ್ ಆಶಯದ ಸಂವಿಧಾನ ಮಾದರಿಯಾಗಿ ಸಮಸಮಾಜದ ದಿಕ್ಕಿನಲ್ಲಿ ಇದೆ. ಅದರ ಆಶಯದಂತೆ ಶೊಷಿತ ಸಮುದಾಯಗಳು ಒಂದಾಗಿ ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಬೇಕಾಗಿದೆಂದು ತಿಳಿಸಿದರು.
ಶಿಕ್ಷಕರಾದ ಶ್ರೀನಿವಾಸ ಮಾತ್ನಾಡಿ ಅದೆ ರೀತಿ ಸರ್ಕಾರದಿಂದ ಪರಿಶಿಷ್ಟ ಜಾತಿ, ಪಂಗಡ ಜನರ ಅಭಿವೃದ್ದಿಗಾಗಿ ಪುನರ್ವಸತಿ, ಸರ್ಕಾರಿ ನೌಕರಿ, ಭೂಮಿ ಮಂಜುರಾತಿ, ನೊಂದವರ ಪರವಾಗಿ ನ್ಯಾಯಾಲಯ, ಅಂತರ್ಜಾತಿ ವಿವಾಹ, ಸಮುದಾಯ ಭವನ,ಪ್ರತ್ಯಕ ಸ್ಮಶಾನ ಭೂಮಿ,ವಿದ್ಯಾರ್ಥಿ ವೇತನ, ವಸತಿ ಶಾಲೆ,ಕಾಲೇಜು ಸೌಲಭ್ಯಗಳನ್ನು ಕೊಡುತ್ತಿದ್ದು ಇದನ್ನು ಬಳಸಿಕೊಂಡು ಅಭಿವೃದ್ದಿಯೊಂದಬೇಕೆಂದು ಕಾರ್ಯಗಾರದ ಯುವವಿದ್ಯಾರ್ಥಿ,ಮಹಿಳೆಯರಿಗೆ ತಿಳಿಸಿಕೊಟ್ಟರು.
ಈ ವೇದಿಕೆಯಲ್ಲಿ ಶಆಲೆಯ ಮುಖ್ಯೋದ್ಯಾಯರು ಅಧ್ಯಕ್ಷತೆವಹಿಸಿದರು, ಪ್ರಾಸ್ತವಿಕ ಮಾತ್ನಾಡಿದ ಸಂಸ್ಥೆಯ ಅಧ್ಯಕ್ಷರಾದ ಎ,ನಾಗರಾಜ್, , ಬಹುಜನ ಸಂಘ ಜಿಲ್ಲಾಧ್ಯಕಷರಾದ ಹಾರ್ಜೇನಹಳ್ಳಿ ಕೃಷ್ಣಪ್ಪ, ಶಾರದ,ಜಿಂಕೆ ರಾಮು, ಚೇತನ ಸಕ್ಪಾಲ್, ನಾಗಸೇನಾ ಕಲಾತಂಡದಿಂದ ಕ್ರಾಂತಿಗೀತೆಗಳಿಂದ ಪ್ರಾರ್ಥಿಸಿ, ಪ್ರವೀಣ್ಚಕ್ರವರ್ತಿ ನಿರೂಪಿಸಿ, ಸುನೀಲ್ ಸ್ವಾಗತಿಸಿ, ಮದು ವಂದಿಸಿದರು.
ನಾಗಸೇನಾ ಕಲಾತಂಡದಿಂದ ಮಾನವರಾಗೋಣವೆಂಬ ಬೀದಿ ನಾಟಕವನ್ನು ಕುರುಗಲ್ ಗ್ರಾಮದಲ್ಲಿ ಪ್ರದರ್ಶಿಸಿಸಲಾಯಿತ್ತು