ಕೋಲಾರ,ಜು.13: ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಮಂದಿರ, ಅಂಬೇಡ್ಕರ್ ಪತ್ರಿಮೆಗೆ ಸ್ಥಳ ಮತ್ತು 100 ನಿವೇಶನಗಳಿಗೆ ಸ್ಥಳವನ್ನು ನೀಡುವಂತೆ ಅಖಿಲ ಭಾರತ ಅಂಬೇಡ್ಕರ್ ಅಲ್ಪಸಂಖ್ಯಾತರ ವಾಲ್ಮೀಕಿ ಪ್ರಜಾಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಪ್ರಕಾಶ್ಬಾಬು ರವರು ಶಾಸಕ ಮಂಜುನಾಥಗೌಡ ರವರಿಗೆ ಮನವಿ ಸಲ್ಲಿಸಿದರು.
ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಹೈಮಾಕ್ಸ್ ಲೈಟ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಶಾಸಕರಿಗೆ ಮನವಿ ಸಲ್ಲಿಸಿದ ಅವರು ಗ್ರಾಮದಲ್ಲಿ ಎಸ್.ಸಿ/ಎಸ್.ಟಿ ಜನಾಂಗದ ಸುಮಾರು 700 ಕುಟುಂಬಗಳು ವಾಸವಾಗಿದ್ದು ಅನೇಕರಿಗೆ ಮನೆಗಳ ನಿರ್ಮಾಣಕ್ಕೆ ನಿವೇಶನಗಳಿಲ್ಲದೆ ತುಂಬಾ ಅನಾನಕೂಲವಾಗಿದೆ ಕೂಡಲೇ 100 ನಿವೇಶನಗಳಿಗೆ ಸ್ಥಳಾವಕಾಶ, ಅಂಬೇಡ್ಕರ್ ಮಂದಿರ ನಿರ್ಮಾಣ ಹಾಗೂ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳವನ್ನು ಕೊಡಿಸಕೊಡಬೇಕೆಂದು ಒತ್ತಾಯಿಸಿಲಾಗಿದೆ.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಶಾಸಕರು ಶೀಘ್ರವಾಗಿ ಸ್ಥಳಾವಕಾಶ ಮಾಡಿಕೊಡುವುದಾಗಿ ಹಾಗೂ ಗ್ರಾಮದಲ್ಲಿ ಸಿ.ಸಿ.ರಸ್ತೆಗಳನ್ನು ನಿರ್ಮಿಸಲು ಹಾಗೂ ಸ್ಮಶಾನ ದಾರಿಯನ್ನು ಮಾಡಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.