ಶಿಡ್ಲಘಟ್ಟ,ಸೆಪ್ಟೆಂಬರ್25: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ತುರ್ತು ವಾಹನ ಸೇವೆ ಲಭಿಸದೆ ಮಹಿಳಾ ರೋಗಿಯೊಬ್ಬಳು ಚಿಕಿತ್ಸೆಗಾಗಿ ಪರದಾಡಿದ ಅಮಾನವೀಯ ಪ್ರಸಂಗ ನಡೆದಿದೆ.
ಚಿಕಿತ್ಸೆಗೆಂದು ಬಂದಿದ್ದ ತಾಲೂಕಿನ ಗೊರಮಡುಗು ಗ್ರಾಮದ ಮುನಿಯಮ್ಮ ಎಂಬಾಕೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಲು 108 ತುರ್ತು ವಾಹನಕ್ಕೆ ಕರೆ ಮಾಡಿ ಮೂರು ತಾಸುವಾದರು ಸಾರ್ವಜನಿಕ ಆಸ್ಪತ್ರೆಯ ಮುಂದೆ ರೋಗಿ ಚಳಿ ಚಳಿಯೆಂದು ಪರಿತಪ್ಪಿಸುವಂತಾಯಿತು ಆಸ್ಪತ್ರೆಯ ವೈದ್ಯರಾಗಲಿ ಅಥವಾ ಸಿಬ್ಬಂದಿಯಾಗಲಿ ಚಳಿಯಿಂದ ನರಳುತ್ತಿದ್ದ ರೋಗಿಯನ್ನು ಕನಿಷ್ಠ ಸೌಜನಕ್ಕಾದರೂ ಆಸ್ಪತ್ರೆಯಲ್ಲಿ ಪುನಃ ಸೇರಿಸಲು ಗೋಜಿಗೆ ಹೋಗಿಲ್ಲ.
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ರೋಗಿಯೊಬ್ಬಳು ತುರ್ತು ವಾಹನಕ್ಕಾಗಿ ಕಾದು ಚಳಿಯಿಂದ ನರಳುತ್ತಿದ್ದರು ಸಹ ಆಸ್ಪತ್ರೆಯ ಅಧಿಕಾರಿಗಳ ಅಮಾನವೀಯ ಧೋರಣೆಯ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರಿಂದ ಪುನಃ ಮತ್ತೊಂದು ತುರ್ತು ವಾಹನ ಕರೆಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾಷಣ ಬಿಗಿಯುತ್ತಾರೆ ಆದರೇ ಆಸ್ಪತ್ರೆಯಲ್ಲಿ ಮಾತ್ರ ಬಡ ರೋಗಿಗಳಿಗೆ ಸೌಲಭ್ಯಗಳು ಗಗನ ಕುಸುಮವಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿ ಆಸ್ಪತ್ರೆಯಲ್ಲಿ ತುರ್ತು ವಾಹನ ಮೂಲೆಗುಂಪಾಗಿದೆ ಅದನ್ನು ದುರಸ್ಥಿಗೊಳಿಸಲು ಆರೋಗ್ಯ ರಕ್ಷಾ ಸಮಿತಿ ಸಂಪೂರ್ಣವಾಗಿ ವಿಫಲವಾಗಿದೆ ಆಸ್ಪತ್ರೆಯಲ್ಲಿ ಐಸಿಯುಐ ಇದ್ದರು ಇಲ್ಲದಂತಾಗಿದೆ ಸ್ಕ್ಯಾನಿಂಗ್ ಯಂತ್ರ ಧೂಳು ತಿನ್ನುತ್ತಿದೆ ಎಂದು ಆಸ್ಪತ್ರೆಯ ಅವ್ಯವಸ್ಥೆಗಳ ವಿರುಧ್ಧ ಕಿಡಿಕಾರಿದರು.
ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಡೆಂಘಿ ಮತ್ತು ಚಿಕುನ್ ಗುನ್ಯಾ ಜ್ವರ ವ್ಯಾಪಕವಾಗಿ ಹರಡಿದೆ ಇದರಿಂದ ರೋಗಿಗಳ ಸಂಖ್ಯೆಯೂ ಸಹ ಅಧಿಕವಾಗಿದ್ದು ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕೌನ್ಸಿಲಿಂಗ್ ಮೂಲಕ 10 ಶುಷ್ರೋಷಕಿಯರು ವರ್ಗಾವಣೆಯಾದರು ಪರ್ಯಾಯ ವ್ಯವಸ್ಥೆಯನ್ನು ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ವಾಹನಕ್ಕಾಗಿ ಕಾದು ಕುಳಿತ ರೋಗಿ..