ಕಾಸರಗೋಡು:ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆ-SSF  ಖಂಡನೆ

Source: ssf | By Arshad Koppa | Published on 23rd March 2017, 8:46 AM | Coastal News |

ಕಾಸರಗೋಡು ಚೂರಿ ಎಂಬಲ್ಲಿ ನಡೆದ ಕೊಟ್ಟಮುಡಿ  ಆಝಾದ್ ನಗರ ನಿವಾಸಿ ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು SSF ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಂಡಂಗೇರಿ ಇವರು ತೀವ್ರವಾಗಿ ಖಂಡಿಸಿದ್ದಾರೆ.
 
ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದೂ, ಅಲ್ಪಸಂಖ್ಯಾತರ ಸಮುದಾಯ ಹಾಗೂ ಆರಾಧನಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದೂ ಸಂಬಂಧಪಟ್ಟವರಲ್ಲಿ ಆಗ್ರಹಪಡಿಸಿದ್ದಾರೆ.

ಸಮುದಾಯ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಾಗೃತೆವಹಿಸಬೇಕೆಂದೂ,
ಶಾಂತಿ ಕಾಪಾಡಬೇಕೆಂದೂ ವಿನಂತಿಸಿ, ಘಟನೆಯಲ್ಲಿ ತೀವ್ರ ಸಂತಾಪವನ್ನು ಸೂಚಿಸುಸಿದ್ದಾರೆ. ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ‌

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...