ಕಾಸರಗೋಡು, ಮಾ ೨೫: ಕಾಸರಗೋಡಿನ ಸಮೀಪದ ಚೂರಿ ಎಂಬಲ್ಲಿ ಮೂರು ದಿನಗಳ ಹಿಂದ್ ಭೀಕರವಾಗಿ ಕೊಲೆಯಾಗಿದ್ದ ಮೌಲವಿ ಹಾಫಿಜ್ ಪ್ರಕರಣವನ್ನು ಮೂರೇ ದಿನದಲ್ಲಿ ಪೋಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ.
ಈ ಮೂವರೂ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದು ಕೆಳುಗುಡ್ಡೆಯ ಅಜೇಶ್(20), ಅಖಿಲೇಶ್(25) ಹಾಗೂ ನಿತಿನ್ ಎಂಬ ಮೂವರನ್ನು ಗುರುತಿಸಿದ್ದಾರೆ. ಮೊದಲ ಇಬ್ಬರು ಆರೆಸ್ಸೆಸ್ಸೆಸ್ ನಲ್ಲಿ ಮುಖ್ಯ ಶಿಕ್ಷಕರಾಗಿ ಗುರುತಿಸಲ್ಪಟ್ಟಿದ್ದಾರೆ.
ತನಿಖೆಗೂ ಮುನ್ನ ಆರೆಸ್ಸೆಸ್ಸ್ ಗೂ ತಮಗೂ ಸಂಬಂಧವಿಲ್ಲ ಎಂದರೂ ಅಜೇಶ್ ನ ಫೋನ್ ಕರೆಗಳ ವಿವರದಿಂದ ಇದು ಗೊತ್ತಾಗಿದೆ. ಅಜೇಶ್ ಮತ್ತು ಅಖಿಲೇಶ್ ನ ಫೋನ್ ವಿವರಗಳನ್ನು ತನಿಖೆ ನಡೆಸಲಾಗುತ್ತಿದೆ.
ಆದರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಶ್ರೀಕಾಂತ್ ರವರು ಈ ಪ್ರಕರಣಕ್ಕೂ ಬಿಜೆಪಿ ಮತ್ತು ಸಂಘಪರಿವಾರಕ್ಕೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.