`ಜನ ಶಿಕ್ಷಣ ಸಂಸ್ಥಾನ ಕಾರವಾರ ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ "ಮಹಿಳಾ ಸಶಕ್ತತೆ ಜಾಗೃತಿ ಕಾರ್ಯಕ್ರಮ"ವು ಮುರ್ಡೇಶ್ವರದ ಓಲಗಮಂಟಪದಲ್ಲಿ 18.3.2017ರ ಶನಿವಾರ ಜರುಗಿತು. ಕಾರ್ಯಕ್ರಮವನ್ನು ಮುರ್ಢೇಶ್ವರ ಪಂಚಾಯತ್ ಅಧ್ಯಕ್ಷೆ ನಾಗರತ್ನ ಪಡಿಯಾರ ಉದ್ಘಾಟಿಸಿ ಮಹಿಳೆಯರು ಆತ್ಮವಿಶ್ವಾಸದಿಂದ ತನ್ನ ಪ್ರಗತಿಗೆ ಮುನ್ನಡೆಯಬೇಕು. ಮಹಿಳೆಯರು ಸಶಕ್ತರಾಗಲು ಪುರುಷರೂ ಮುಕ್ತ ಮನಸಿನಿಂದ ಪ್ರೋತ್ಸಾಹಿಸಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೀನಾವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲಿನ ಆಡಳಿತ ನಿರ್ದೇಶಕಿ ಪುಷ್ಪಲತಾ ಎಂ.ಎಸ್. ಮಾತನಾಡಿ ನಮ್ಮ ನೆಲ ಜಲವನ್ನು ನಾವು ಸ್ತ್ರೀ ಎಂದು ಮಾತೃಸ್ಥಾನ ನೀಡಿದ್ದೇವೆ. ಸಮಾನತೆಯ ಹಕ್ಕು ಇದ್ದರೂ ಕೂಡ ಇಂದು ಮಹಿಳೆ ಶೊಷಿತಳಾಗುತ್ತಿದ್ದಾಳೆ. ಪುರುಷರು ಮಹಿಳೆಯರೆಲ್ಲರೂ ತಮ್ಮ ಮನಸ್ಥಿತಿಯಲ್ಲಿ ಪರಿವರ್ತನೆ ತಂದುಕೊಂಡಾಗ ಮಹಿಳೆಯ ಸಬಲೀಕರಣ ಸಾಧ್ಯ ಎಂದು ನುಡಿದರು. ಇನ್ನೋರ್ವ ಅತಿಥಿಯಾಗಿ ಪಾಲ್ಗೊಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಶ್ರೀಮತಿ ಯಲ್ಲಮ್ಮ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನಶಿಕ್ಷನ ಸಂಸ್ಥಾನದ ಶಸಿಕಾಂತ ನಾಯ್ಕ ಮಾತನಾಡಿ ಸಂಸ್ಥೆಯಿಂದ ನೀಡಲಾಗುವ ವಿವಿಧ ವೃತ್ತಿತರಭೇತಿಯ ಜೊತೆಯಲ್ಲಿ ಬದುಕಿನ ನಿರ್ವಹಣೆಯ ಕೌಶಲವನ್ನೂ ಅರಿತುಕೊಂಡು ಮಹಿಳೆ ಶಕ್ತಳಾಗಬೇಕಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಜನಶಿಕ್ಷಣ ಸಂಸ್ಥಾನ ನೀಡುವ ವೃತ್ತಿತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಪಂಚಾಯತ ಸದಸ್ಯರಾದ ನಯನಾ ನಾಯ್ಕ, ಪಾವತಿ ಹರಿಕಾಂತ, ಮಂಜುಳಾ ನಾಯ್ಕ, ಉಪಸ್ಥಿತರಿದ್ದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕಾ ಕನ್ನಡ ಸಾಃಇತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಎಮ್.ಪಿ. ಬಂಢಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಕುಮಾರಿ ಅಶ್ವಿನಿ ಪಟಗಾರ ಪ್ರಾರ್ಥಿಸಿದರೆ ಜನಶಿಕ್ಷಣ ಸಂಸ್ಥಾನದ ಉಷಾ ದುರ್ಗೇಕರ ವಂದಿಸಿದರು. ರೇಶ್ಮಾ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಉಪಸ್ಥಿತರಿದ್ದರು