ಕಾರವಾರ: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ (ರಿ) ಬೆಳಗಾವಿಯವರ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಘೋಷಿಸಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸದಾಶಿವಗಡದ ಡಾ. ವಸಂತ ಬಾಂದೇಕರರ 58 ವರ್ಷ ನಿರಂತರ ಕನ್ನಡ ಸಾಹಿತ್ಯ, ಸಂಘಟನೆ, ಕಲಾಸೇವೆಯನ್ನು ಪರಿಗಣಿಸಿ ರಾಜ್ಯ ಜೀವನ ಗೌರವ ಸೇವಾರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬಾಲ್ಯ 12ನೇ ವಯಸ್ಸಿನಿಂದಲೇ ನಾಟಕ, ರೇಡಿಯೋ ನಾಟಕ, ಕವನ ರಚನೆ, ಗಾಯನ ವಾದ್ಯವೃಂದ್ಯ, ಏಕಪಾತ್ರಾಭಿನಯದ ಮೂಲಕ ಹಲವಾರು ರಾಜ್ಯ-ರಾಷ್ಟ್ರಮಟ್ಟದ ಪ್ರಶಸ್ತಿ 1000 ಶಾಲೆಗಳಲ್ಲಿ ಜಾಗೃತ ಕಾರ್ಯಕ್ರಮ ಹಾಗೂ ಗಿನ್ನೀಜ್ ದಾಖಲೆಯನ್ನು ಮಾಡಿದ ಇವರನ್ನು ಮಾರ್ಚ್ 25-2018 ರಂದು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ರಾಜ್ಯದ ವಿವಿಧ ಗಣ್ಯರ ಜೊತೆಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.