ಮಾ, 8 ಮತ್ತು 9 ರಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಸದಸ್ಯರ ಜಿಲ್ಲಾ ಪ್ರವಾಸ
ಕಾರವಾರ: ಮಾರ್ಚ 8 ಮತ್ತು 9 ರಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅವರು ಮಾ, 8 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾಯ್ ನಿರ್ವಾಹಣಾಧಿಕಾರಿ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಫಾಯಿ ಕರ್ಮಚಾರಿ ವಲಯದ ಅಧಿಕಾರಿ ಹಾಗೂ ಮುಖ್ಯಸ್ಥರೊಂದಿಗೆ ಸಭೆ ನೆಡೆಸುವುರು. ಮಧ್ಯಾಹ್ನ 2 ಗಂಟೆಗೆ ಸಫಾಯಿ ಕರ್ಮಚಾರಿಗಳ ವಸತಿ ಪ್ರದೇಶಗಳಿಗೆ ಬೇಟಿ ನೀಡುವುರು.
ಮಾರ್ಚ 9 ರಂದು ಬೆಳಗ್ಗೆ 10 ಗಂಟೆಗೆ ಕಾರವಾರ ಬಂದರಿನ ಕಮಾಂಡರ್/ಅಡ್ಮಿರಲ್ ಮತ್ತು ಮಧ್ಯಾಹ್ನ 12 ಕ್ಕೆ ಕದಂಬ ನೌಕಾನೆಲೆ ಅಧಿಕಾರಿಗಳು ಹಾಗೂ ಸಫಾಯಿ ಕರ್ಮಚಾರಿಗಳ ಮುಖ್ಯಸ್ಥರೊಂದಿಗೆ ಚರ್ಚೆಯಲ್ಲಿ ಭಾಗವಹಿಸುವುರು.