ಕಾರವಾರ: ನೂತನವಾಗಿ ನಿರ್ಮಿಸಿದ ರಾಕ್ ಗಾರ್ಡನ್ ನಲ್ಲಿ ವೀಕ್ಷಣೆ ಮಾಡಲು ಬಂದಿದ್ದ ಪ್ರವಾಸಿಗರ ಮೇಲೆ ಕುಡಕನೋರ್ವನೊಬ್ಬ ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.
ರಾಕ್ ಗಾರ್ಡನ್ ವೀಕ್ಷಣೆ ಮಾಡಲು ಬಂದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ಕುಡುಕ ಪ್ರವಾಸಿಗನ ದಾಂದಲೆಯಿಂದ ಪ್ರವಾಸಿಗರು ಆತಂಕಿತರಾಗಿದ್ದು ರಾಕ್ ಗಾರ್ಡನ್ ಸಿಬ್ಬಂದಿ ಹಾಗೂ ಸ್ಥಳೀಯರು ಕುಡುಕನಿಗೆ ಥಳಿಸಿದ್ದಾರೆ. ಇದರಿಂದಾಗಿ ಕುಡಕನು ಅಸ್ಥವ್ಯಸ್ತಗೊಂಡಿದ್ದಾನೆ.ಘಟನಾ ಸ್ಥಳಕ್ಕೆ ನಗರಠಾಣಾ ಪೊಲೀಸರು ಭೇಟಿ ನೀಡಿ ಕುಡಕನನ್ನು ವಶಕ್ಕೆ ಪಡೆದು ಅಸ್ತವ್ಯಸ್ಥಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾರವಾರ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಮಹಿಳಾ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.