ಕಾರವಾರ ಅಂಕೊಲಾ ಜೆ.ಡಿ.ಎಸ್. ಕಾರ್ಯಕರ್ತರ ಸಭೆ ಕಾರವಾರದಲ್ಲಿ ಜಿಲ್ಲಾಧ್ಯಕ್ಷರಾದ ಬಿ. ಆರ್. ನಾಯ್ಕರವರ ಅಧ್ಯಕ್ಷತೆಯಲ್ಲಿ ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಜೆ.ಡಿ.ಎಸ್. ಪಕ್ಷದ ಜಿಲ್ಲಾ ವೀಕ್ಷಕರಾದ ಮರಿತಿಬ್ಬೇಗೌಡಾ ಸಮ್ಮುಖದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ, ವೀಕ್ಷಕರಾದ ಮರಿತಿಬ್ಬೇಗೌಡಾರವರು ಕಾರವಾರ ಅಂಕೋಲಾ ಕ್ಷೇತ್ರ ಎಲ್ಲಾ ಕಾರ್ಯರ್ತರು, ಮುಖಂಡರು ಒಟ್ಟಾಗಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಮುಂಬರುವ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಕೈಬಲಪಡಿಸಲು ಮುಂದಾಗಬೇಕು. ಕಾರಣ ಈಗಿಂದಲೇ ಬೂತ್ ಮಟ್ಟದಿಂದ ಸಂಘಟನೆಯ ಕಾರ್ಯವನ್ನು ಕೈಗೊಳ್ಳುವುದು ಅವಶ್ಯವಿದೆ ಎಂದು ಕಿಮಿಮಾತನ್ನು ಹೇಳಿದರು.
ಅದೇ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪುರುಷೋತ್ತಮ ಸಾವಂತರು ನಮ್ಮ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ಒಂದಿಲ್ಲೊಂದು ಸಮಸ್ಸೆಗಳು ಉದ್ಭವಿಸಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಅನೇಕ ನಿಷ್ಠಾವಂತ ಕಾರ್ಯಕರ್ತರು ಇದರಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದಾರೆ. ಅಲ್ಲದೇ ಈ ಕ್ಷೇತ್ರಕ್ಕೆ ರಾಜ್ಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದರಿಂದ ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಂಕೋಲಾ ಕಾರವಾರ ಕ್ಷೇತ್ರದ ಮತದಾರ ಬಂಧುಗಳು ಹೆಚ್.ಡಿ.ಕುಮಾರಸ್ವಾಮಿ ಒಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಆಶೆ ವ್ಯಕ್ತಪಡಿಸುತ್ತಿದ್ದು ಕೂಡಲೇ ಈ ಕ್ಷೇತ್ರಕ್ಕೆ ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಯನ್ನು ಘೋಷಿಸಿ ಮುಂದಿನ ಸಂಘಟನೆಗೆ ಅನುವುಮಾಡಿಕೊಡಬೇಕೆಂದು ಸಾವಂತರವರು ವಿನಂತಿಸಿದರು. ಒಂದು ವಾರದ ಅವಧಿಯೊಳಗೆ ಸಂಬಂಧಪಟ್ಟ ಮುಖಂಡರೊಂದಿಗೆ ಸಮಾಲೋಚಿಸಿ ಅಭ್ಯರ್ಥಿ ಘೋಷಣೆ ಮಾಡುವುದಾಗಿ, ಸಧ್ಯ ಸಾವಂತರ ಮುಂದಾಳತ್ವದಲ್ಲಿ ಸಂಘಟನೆಯನ್ನು ಮುಂದುವರಿಸಬೇಕೆಂದು ಕಾರ್ಯಕರ್ತರಿಗೆ ವೀಕ್ಷಕರಾದ ಮರಿತಿಬ್ಬೇಗೌಡಾರವರು ತಿಳಿಹೇಳಿದರು. ಈ ಸಭೆಯಲ್ಲಿ ಕಾರವಾರ ಅಂಕೋಲಾ ತಾಲೂಕಿನ ಅಧ್ಯಕ್ಷರಾದ ಅಜೀತ ಪೋಕಳೆ ಮತ್ತು ಕೆ.ಜಿ.ನಾಯ್ಕ ಅಲ್ಲದೇ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಗಜು ನಾಯ್ಕ, ಮಂಜುನಾಥ ನಾಯ್ಕ, ಖಲೀಲುಲ್ಲಾ ಸರ್, ಪಿ.ಎಂ.ಕುವಾಳೇಕರ, ರಮೇಶ ನಾಗೇಕರ, ಪ್ರದೀಪ ಶೇಜವಾಡಕರ, ಶಂಕರ ಬೊಬ್ರುಕರ, ಘನಶ್ಯಾಮ ಗುನಗಿ, ಥಾಕು ದುರ್ಗೇಕರ, ರಾಜೇಶ ಕೋಡಾರಕರ, ರೋಹೀದಾಸ ಉಳವಿ, ಶ್ರೀಮತಿ ಅಮೇನಾ, ಪಾಂಡುರಂಗ ನಾಯ್ಕ, ಸಂದೀಪ ಬಂಟ್, ಅರುಣ ನಾಯ್ಕ ಮತ್ತು ನರಸಿಂಹ ಭಾಗವತ ಇನ್ನಿತರರು ಉಪಸ್ಥಿತರಿದ್ದರು.