ಕಾರವಾರ: ಆತ್ಮವನ್ನು ಶಾಂತವಾಗಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದ್ದು ಪ್ರತಿಯೋಬ್ಬರು ಯೋಗಾಭ್ಯಾಸ ರೂಡಿಸಿಕೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಅವರು ಗುರುವಾರ ಬೆಳಗ್ಗೆ 6.30ಕ್ಕೆ ಬಾಡ ಗುರುಮಠದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 4ನೇ ಅಂತತಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಗ ದಿನಾಚೆಣೆಯಾಗಬಾರದು, ಯೋಗವು ದಿನವೂ ಆಗಬೇಕು. ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೋಳಿಸಬಾರದು. ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಯೋಗ ಸಹಕಾರಿಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಯೋಗ ಶಾಲೆಗಳನ್ನು ಪ್ರಾರಂಬಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಾಯಕ ಆಯುಕ್ತ ಅಭಿಜೀನ ಮಾತನಾಡಿ ಎಲ್ಲರಿಗೂ ಮಾನಸಿಕ ನೆಮ್ಮದಧಿ ನೀಡಲು ಯೋಗ ಸಹಕಾರಿಯಾಗಿದೆ. ಭಯೋತ್ಪಾದನೆ ಹೆಚ್ಚುತ್ತಿರುವ ಸಂಧರ್ಭದಲ್ಲಿ ಎಲ್ಲ ರಾಷ್ಟ್ರಗಳನ್ನು ಒಟ್ಟುಗೂಡಿಸಿ ಶಾಂತಿ ಮಂತ್ರದತ್ತ ಕೊಂಡೋಯ್ಯಲು ಅಂತರಾಷ್ಟೀಯ ಯೋಗ ದಿನಚಾರಣೆ ಆಚರಿಸಲಾಗುತ್ತದೆ. ಇದು ಭವಿಷ್ಯತ್ತಿಗೆ ಸಹಕಾರಿಯಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಯುರ್ವೇದ ವೈದ್ಯ ಡಾ. ಜಗದೀಶ ಯಾಜಿ ವಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಗ ಒಂದು ಪುರಾತನವಾದ ಭಾರತೀಯ ಚಿಕಿತ್ಸಾ ಪದ್ದತಿಯಾಗಿದೆ. ಇದಕ್ಕೆ ಸಾವಿರಾರಿ ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬ ಮನುಷ್ಯನು ದೈಹಿಕಾಗಿ ಮತ್ತು ಮಾನಸಿಕವಾಗಿ ಚೈತನ್ಯ ಪೂರ್ಣನಾಗಲು ಯೋಗ ಒಂದು ಉತ್ತಮ ಸಾಧನವಾಗಿದೆ. ದೇಹ ಮತ್ತು ಮನಸ್ಸನ್ನು ಒಂದು ಮಾಡುವುದೇ ಯೋಗ. ಯೋಗದಿಂದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ವ್ಯಕ್ತಿತ್ವ ವಿಕಸಗೊಳ್ಳುತ್ತದೆ ಎಂದರು.
ಪತಂಜಲಿ ಯೋಗಪೀಠದವರು ಸಾರ್ವಜನಕರಿಗೆ ಭುಜಂಗಾಸನ, ಪ್ರಾಣಯಾಮ, ವಕ್ರಾಸನ ಗೋಮುಖಾಸನ ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡುವದನ್ನು ಕಲಿಸಿಕೊಟ್ಟರು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಯುವಜನ ಸಬಲೀಕರಣ ಇಲಾಖೆ ಕ್ರೀಡಾ ತರಬೇತಿ ವಿದ್ಯಾರ್ಥಿಗಳು, ಶಾಲಾ ವಿದ್ಯರ್ಥಿಗಳು ಶಿಕ್ಷಕರು ಸೇರಿ 400ಕ್ಕೂ ಹೆಚ್ಚಿನ ಜನರು ಸಾಮೂಹಿಕ ಯೋಗಾಭ್ಯಾಸ ಮಾಡಿದರು.
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸಿ.ಆರ್. ಬಸವರಾಜಯ್ಯ ಸ್ವಾಗತಿಸಿದರು. ಉಮ್ಮಚಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈಧ್ಯ ಡಾ.ಯೋಗೇಶ ಮಡಗಾಂಕರ ವಂದನಾರ್ಪಣೆ ಮಾಡಿದರು. ಡಾ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.