ಕಾರವಾರ ಸೆ.5 : ವಿದ್ಯಾರ್ಥಿಗಳಲ್ಲಿ ಆದರ್ಶ ನೀತಿ ಮತ್ತು ಮೌಲ್ಯಗಳನ್ನು ತುಂಬಿ ಮುಂದಿನ ಸಮಾಜಕ್ಕೆ ಬೆಳಕಾಗುವಂತೆ ರೂಪಿಸುವಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಮತ್ತು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸುವವನೇ ನಿಜವಾದ ಶಿಕ್ಷಕ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲ್ ಚಂದ್ರಶೇಖರ ನಾಯಕ ಅಭಿಪ್ರಾಯಪಟ್ಟರು.
ಕಾರವಾರದ ಜಿಲ್ಲಾರಂಗಮಂದಿರದಲ್ಲಿ ನಡೆದ ಕಾರವಾರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಇಲಾಖೆಯ ಗುರುಚೇತನ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಕ್ಷಕರು ತಮ್ಮ ಆಸಕ್ತಿಗೆ ಅನುಗುಣವಾಗಿ ವೃತ್ತಿ ನೈಪುಣ್ಯತೆಗಳನ್ನು ಗುರುಚೇತನ ಕಾರ್ಯಕ್ರಮದ ಮೂಲಕ ಬೆಳೆಸಿಕೊಳ್ಳಿ ಎಂದರು.
ಶಾಸಕ ಸತೀಶ್ ಸೈಲ್ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಲೆಯನ್ನು ಮೂರ್ತಿಯನ್ನಾಗಿಸುವ ಮಹತ್ತರ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ.ನನ್ನ ಕಾರವಾರ ತಾಲೂಕಿನ ಪ್ರತಿ ಶಾಲೆಯನ್ನು ಪ್ರಗತಿ ಮತ್ತು ಮಾದರಿ ಶಾಲೆಯನ್ನಾಗಿಸಲು ಸಂಪೂರ್ಣ ಸಹಕಾರವನ್ನು ಒದಗಿಸಲಾಗುವದು ಎಂದರು.
ತಾಲೂಕ ಪಂಚಾಯತ್ ಅಧ್ಯಕ್ಷ ಪ್ರಮೀಳಾ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ವಿ. ನಾಯ್ಕ, ಸಾರ್ವಜನಿಕ ಶಿಕ್ಷಣಭ ಇಲಾಖೆ ಬಿ.ಇ.ಒ ರಾಮಕೃಷ್ಣ ನಾಯ್ಕ ವೇದಿಕೆಯಲ್ಲಿದ್ದರು. ಇದೇ ವೇಳೆ2016-17ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಾರವಾರ ತಾಲೂಕಿನ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಮೋಹನ ಮಹಾಲೆ ಮತ್ತು ಪ್ರೌಡಶಾಲಾ ವಿಭಾಗದಲ್ಲಿ ಶ್ರೀದೇವಿ ಕೆರೆಮನೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ನಿವೃತ್ತ ಶಿಕ್ಷಕರಾದ ಸರೋಜಿನಿ ಕುಬಾಲ್, ಉಷಾ ಎಮ್.ಸಾಳುಂಕೆ, ಶೇಖಬಾಯಿ ಆಚಾರಿ, ಗಣಪತಿ ಪಿ.ನಾಯ್ಕ, ಕುಸುಮಾ ಜಾಂಬವಳೆಕರ, ಕಮಲಾ ಭಟ್, ಯಮುನಾ ಪಟಗಾರ, ಕೊಸಾಂವ್ ಮಿರಾಂಡಾ, ಕುಮುದಾ ಎಸ.ಗಾಂವಕರ್, ಮತ್ತು ಎಸ್.ಎಸ್,ಎಲ್.ಸಿ ಪರೀಕ್ಷೇಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಶಿಕ್ಷಕರ ಮಕ್ಕಳಾದ ಸ್ನೇಹಾ ಪ್ರದೀಪ ನಾಯ್ಕ, ಸ್ವಾತಿ ತಳೆಕರ, ದರ್ಶನ ಆಗೇರ, ವೌಷ್ಣವಿ ಕಲಗುಟಕರ, ಕೌಸರ್ ಜಾಹ ಶೇಖ, ರಕ್ಷಿತಾ ಭಾಡಕರ್, ಸುಜೇಯ ಆರ್. ನಾಯ್ಕ, ವೈಬವಿ ಉದಯ ನಾಯ್ಕ ಇವರನ್ನು ಸನ್ಮಾನಿಸಲಾಯಿತು.