ಕಾರವಾರ, ಜೂನ : ಮುಸ್ಲಿಂ ಭಾಂದವರು ಜೂನ 25 ರಿಂದ 27 ವರೆಗೆ ರಂಝಾನ್ ಹಬ್ಬವನ್ನು ಆಚರಿಸುವರಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಜೂನ 25 ಮತ್ತು 26 ರಂದು ಭಟ್ಕಳ ತಾಲ್ಲೂಕಿನಲ್ಲಿ ಹಾಗೂ ಜೂನ 26 ಮತ್ತು 27 ರಂದು ಹಳಿಯಾಳ, ಯಲ್ಲಾಪುರ ತಾಲೂಕುಗಳು, ಹಾಗೂ ಶಿರಸಿ ನಗರ ಮತ್ತು ಶಿರಸಿ ಹೊಸ ಮಾರುಕಟ್ಟೆ ಠಾಣ ವ್ಯಪ್ತಿಯಲ್ಲಿ ಎಲ್ಲಾ ರೀತಿಯ ವೈನ್ ಶಾಪ್ ಮತ್ತು ಬಾರ್ ಮದ್ಯದಂಗಡಿಗಳನ್ನು ಮುಚ್ಚಲು ಪ್ರಭಾರ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಸದರಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂದರ್ಶನ ಮುಂದೂಡಿಕೆ
ಕಾರವಾರ ಜೂನ 23 : ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ತಾತ್ಕಾಲಿ ಪ್ರಾಧ್ಯಾಪಕರು ಹುದ್ದೆಗಳಿಗಾಗಿ ಏರ್ಪಡಿಸಲಾಗಿದ್ದ ಸಂದರ್ಶನವನ್ನು ಜೂನ 28 ರಂದು ಮುಂದೂಡಲಾಗಿದೆ, ಹಾಗೂ ನಿಗದಿಪಡಿಸಲಾಗಿದ್ದ ವಿದ್ಯಾರ್ಹತೆಯಲ್ಲಿ ಅರಣ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಎಂದು ಮಾರ್ಪಡಿಸಲಾಗಿರುವದೆಂದು ಅರಣ್ಯ ಮಹಾವಿದ್ಯಾಲಯದ ಡೀನ ತಿಳಿಸಿದ್ದಾರೆ.