ಕಾರವಾರ: ಜುಲೈ ೧೯ ರಂದು ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ ಜುಲೈ 19 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 787.9 ಮಿ.ಮೀ ಮಳೆಯಾಗಿದ್ದು ಸರಾಸರಿ 71.6 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿ.ಮೀ ಇದ್ದು, ಇದುವರೆಗೆ ಸರಾಸರಿ 485.2 ಮಿ.ಮೀ ಮಳೆ ದಾಖಲಾಗಿದೆ.
ಅಂಕೋಲಾ 74.4 ಮಿ.ಮೀ, ಭಟ್ಕಳ 78 ಮಿ.ಮೀ, ಹಳಿಯಾಳ 10.8 ಮಿ.ಮೀ. , ಹೊನ್ನಾವರ 49.2 ಮಿ.ಮೀ, ಕಾರವಾರ 106.2 ಮಿ.ಮೀ, ಕುಮಟಾ 48.6 ಮಿ.ಮೀ, ಮುಂಡಗೋಡ 18.2. ಮಿ.ಮೀ, ಸಿದ್ದಾಪುರ 118.2 ಮಿ.ಮೀ, ಶಿರಸಿ 93.5 ಮಿ.ಮೀ., ಜೋಯಡಾ 71.8
ಮಿ.ಮೀ, ಯಲ್ಲಾಪುರ 79.4 ಮಿ.ಮೀ, ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50 ಮೀ (ಗರಿಷ್ಟ), 31.60 ಮೀ (ಇಂದಿನ ಮಟ್ಟ), ಕೊಡಸಳ್ಳಿ: 75.50ಮೀ (ಗರಿಷ್ಟ), 69.65 ಮೀ. (ಇಂದಿನ ಮಟ್ಟ), ಸೂಪಾ: 564ಮೀ (ಗ), 537.30 ಮೀ (ಇ.ಮಟ್ಟ), ತಟ್ಟಿಹಳ್ಳ: 468.38ಮೀ (ಗ), 451.15 ಮೀ (ಇ.ಮಟ್ಟ), ಬೊಮ್ಮನಹಳ್ಳಿ: 438.38ಮೀ (ಗ), 435.93 ಮೀ (ಇ.ಮಟ್ಟ), ಗೇರುಸೊಪ್ಪ: 55ಮೀ (ಗ), 49.60 ಮೀ (ಇ.ಮಟ್ಟ), ಲಿಂಗನಮಕ್ಕಿ 1819 ಅಡಿ (ಗ), 1768.80 ಅ (ಇಂದಿನ ಮಟ್ಟ).
ಕಾರವಾರ ‘ದೊಂಬರಾಟ’ ಪದ ಬಳಕೆ ನಿಷೇದ
ಕಾರವಾರ ಜುಲೈ 19 : ದೃಷ್ಯ ಮಾದ್ಯಮ ಮತ್ತು ಮುದ್ರಣ ಮಾದ್ಯಮಗಳಲ್ಲಿ ‘’ದೊಂಬರಾಟ” ಪದವನ್ನು ವ್ಯಂಗ್ಯ ಪದವನ್ನಾಗಿ ಬಳಕೆ ಮಾಡುತ್ತಿರುವ ಕುರಿತು ಕರ್ನಾಟಕ ರಾಜ್ಯ ದೊಂಬರ ಸಂಘದ ಅದ್ಯಕ್ಷರು ವಿಷಾದ ವ್ಯಕ್ತಪಡಿಸಿ ಅನಾವಶ್ಯಕವಾಗಿ ದೊಂಬರ ಜಾತಿಯನ್ನು ವ್ಯಂಗ್ಯ ಪದವನ್ನಾಗಿ ಬಳಕೆ ಮಾಡಿಕೊಳ್ಳದಂತೆ ಮಾದ್ಯಮದವರಿಗೆ ಮನವಿ ಮಾಡಿದ್ದಾರೆ.