ಕಾರವಾರ:ಪ್ರಥಮ ಮುದ್ರಣ ಪುಸ್ತಕ ಆಹ್ವಾನ
ಕಾರವಾರ ಆಗಸ್ಟ 19 : ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು 2017ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಪಠ್ಯ ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಭಾರತೀಯ ಇತರೆ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು ಪ್ರಕಟಣಾ ಸಂಸ್ಥೆಗಳು, ಹಾಗೂ ವಿತರಿಕರಿಂದ ಮೊದಲೆ ಹಂತದಲ್ಲಿ ಪುಸ್ತಕಗಳನ್ನು ಆಹ್ವಾನಿಸಿದೆ.
ಜನೇವರಿ 2017 ರಿಂದ ಮಾರ್ಚ 2017 ರ ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಆಗಸ್ಟ 31 2017ರ ವರೆಗೆ ಕಾಪಿರೈಟ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ : ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಆಗಸ್ಟ 31 2017 ಒಳಗಾಗಿ ಸಲ್ಲಿಸುವಂತೆ ಕಾರವಾರ ಜಿಲ್ಲಾ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
ಸಹಕಾರ ಸಂಘಗಳ ಸಾಮಾನ್ಯ ಸಭೆ
ಕಾರವಾರ ಆಗಸ್ಟ 19 : ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು 2016-17ನೇ ಸಾಲಿನ ಲೆಕ್ಕಪರಿಶೋದನೆಯನ್ನು ಕಡ್ಡಾಯವಾಗಿ ಲೆಕ್ಕಪರಿಶೋಧಕರಿಂದ ನಿರ್ವಹಿಸಿಕೊಂಡು ಲೆಕ್ಕಪರಿಶೋದನಾ ವರದಿಯನ್ನು ಸೆಪ್ಟಂಬರ 1 ರೊಳಗಾಗಿ ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋದನಾ ಇಲಾಖೆ, ದತ್ತಾತ್ರೇಯ ಕಾಂಪ್ಲೆಕ್ಸ, ಸಾಯಿಮಂದಿರ ರಸ್ತೆ ಕಾರವಾರ ಇವರಿಗೆ ಸಲ್ಲಿಸುವದರ ಜೋತೆಗೆ ಸಕ್ಷಮ ಪ್ರಾಧಿಕಾರಕ್ಕೂ ಸಲ್ಲಿಸಬೇಕೆಂದು ಉ.ಕ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋದನೆ ಉಪನಿರ್ದೇಶಕರು ತಿಳಿಸಿದ್ದಾರೆ.