ಕಾರವಾರ ಸೆಪ್ಟಂಬರ್ 12 : ಸೆಪ್ಟಂಬರ್ 13 ರಂದು ಕಾರವಾರ ಶಹರ ಭಾಗದಲ್ಲಿ ಲೈನ್ ನಿರ್ವಹಣಾಕಾರ್ಯ ನಿಮಿತ್ತ ಕಾಜುಭಾಗ, ಆಶ್ರಮರೋಡ, ತಾಮ್ಸೆವಾಡ, ಕೇಶವನಾಯ್ಕವಾಡ ಮಧ್ಯವಾಡ,ಸಾಯಿಕಟ್ಟಾಕ್ರಾಸ್, ಕೋಡಿಭಾಗರಸ್ತೆ, ಅರ್ಜುನಥೇಟ್ರರೋಡ, ಸರ್ವೋದಯನಗರ ಹಾಗೂ ಕಾರವಾರ ಶಹರ ಭಾಗದಲ್ಲಿ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಇರುತ್ತದೆ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಕೋರಿದ್ದಾರೆ.
ಸಮೀಪ ದೃಷ್ಟಿ ದೋಷವಿದ್ದ ವಯಸ್ಕರಿಗೆ ಕನ್ನಡಕ ಒದಗಿಸಲು ಅರ್ಜಿ ಆಹ್ವಾನ
ಕಾರವಾರ ಸೆಪ್ಟಂಬರ್ 12 : ಜಿಲ್ಲಾ ಆರೋಗ್ಯ ಮತ್ತು ಕು.ಕ.ಸೊಸೈಟಿ, ಅಂಧತ್ವ ನಿಯಂತ್ರಣ ವಿಭಾಗಕ್ಕೆ ದೃಷ್ಠಿ ದೋಷವಿದ್ದ ಶಾಲಾ ಮಕ್ಕಳಿಗೆ ಹಾಗೂ ಸಮೀಪ ದೃಷ್ಟಿ ದೋಷವಿದ್ದ ವಯಸ್ಕರಿಗೆ ನಂಬರಿನ ಪ್ರಕಾರ ಒಳ್ಳೆಯ ಗುಣಮಟ್ಟದ ಕನ್ನಡಕವನ್ನು ನೀಡಲು ದರಪಟ್ಟಿಯನ್ನು ಕರೆಯಲಾಗಿದೆ. ಅರ್ಜಿ ನಮೂನೆಯನ್ನು ಅಂಧತ್ವ ನಿಯಂತ್ರಣ ವಿಭಾಗದ ಕಛೇರಿಯಿಂದ ಪಡೆದು ಸೆಪ್ಟಂಬರ್ 18 ರೊಳಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಛೇರಿಯ, ಅಂಧತ್ವ ನಿಯಂತ್ರಣ ವಿಭಾಗದಲ್ಲಿ ಪಡೆಯಬಹುದು.