ಕಾರವಾರ: ಸೆ.30ರಂದು ಅಂಚೆ ಅದಾಲತ್
ಕಾರವಾರ ಸೆಪ್ಟಂಬರ 24 : ಸೆಪ್ಟಂಬರ 30 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಾರ್ಯಾಲಯ ಕಾರವಾರ ವಿಭಾಗದಲ್ಲಿ ಅಂಚೆ ಅಧಿಕ್ಷಕರ ಅಧ್ಯಕ್ಷತೆಯಲ್ಲಿ ಅಂಚೆ ಅದಾಲತ್ ನಡೆಯಲಿದೆ.
ಈ ವಿಭಾಗದ ಅಂಚೆಕಛೇರಿಗಳಿಂದ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ, ಸೂಚನೆಗಳನ್ನು ಅಂಚೆ ಅದಾಲತ್ನಲ್ಲಿ ಚರ್ಚಿಸಲಾಗುವದು.
ಸೆಪ್ಟಂಬರ 28 ರೊಳಗೆ ಕಾರವಾರ, ಅಂಕೊಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಂಚೆಸೇವೆಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆಗಳನ್ನು ಅಂಚೆ ಅದಾಲತನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಛೇರಿಯಲ್ಲಿ ರವಾನೆಗಾಗಿ ಸಲ್ಲಿಸಬಹುದು. ಇಂತಹ ಲಕೋಟೆಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವದಿಲ್ಲ ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಜೆ.ಎಫ್. ಶೇಖರ ತಿಳಿಸಿದ್ದಾರೆ.