ಕುಮಟಾ, ಮಾ ೨೫: ಚಲಿಸುತ್ತಿದ್ದ ಬಿಸಿ ಡಾಂಬರ್ ತುಂಬಿದ ಲಾರಿಯೊಂದು ಪಲ್ಟಿಯಾಗಿ, ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾರಿಯಲ್ಲಿದ್ದ ಮೂವರಲ್ಲಿ ಓರ್ವನ ಮೇಲೆ ಬಿಸಿ ಡಾಂಬರ್ ಸುರಿದು ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಿರ್ಜಾನ ಬಳಿ ಭಾನುವಾರ ನಡೆದಿದೆ.
ಕಾರವಾರದಿಂದ ಹಾಸನಕ್ಕೆ ತೆರಳುತ್ತಿದ್ದ ಡಾಂಬರ್ ಲಾರಿಯಾಗಿದ್ದು, ಮೂವರು ಲಾರಿಯಲ್ಲಿದ್ದರು. ಗಂಭೀರ ಗಾಯಗೊಂಡವನನ್ನು ಹಾಸನದ ಸಿದ್ದೇಶ(೨೫) ಎಂದು ಗುರುತಿಸಲಾಗಿದೆ.
ಆತನನ್ನು ಮಂಗಳೂರಿಗೆ ರವಾನಿಸಲಾಗಿದ್ದು, ಕುಮಟಾ ಪೋಲಿಸ್ ಠಾಣೆಯ ಪಿಸೈ ಶಿವಕುಮಾರ ಸ್ಥಳಕ್ಕೆ ಧಾವಿಸಿದ್ದಾರೆ.