ಭಟ್ಕಳ :2016-17 ರಲ್ಲಿ ವಿವಿಧ ಯೋಜನೆಗಳಲ್ಲಿ ತೋರಿದ ನಾಲ್ಕು ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಗೌರವ

Source: so english | By Arshad Koppa | Published on 23rd April 2017, 10:07 AM | Coastal News |

ಭಟಕಳ: ಭಟ್ಕಳ ತಾಲೂಕಿನ ವಿವಿಧ  ಗ್ರಾಮ ಪಂಚಾಯತಗಳಲ್ಲಿ 2016-17 ರಲ್ಲಿ ವಿವಿಧ ಯೋಜನೆಗಳಲ್ಲಿ ತೋರಿದ ನಾಲ್ಕು ಗ್ರಾಮ ಪಂಚಾಯತ ಅಧ್ಯಕ್ಷರು  ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಜಿಲ್ಲಾ ಪಂಚಾಯತ ಆಯ್ಕೆ ಮಾಡಿದ್ದು ಎಪ್ರಿಲ್ 25ರಂದು ಕಾರವಾರದಲ್ಲಿ ಇವರನ್ನು ಗೌರವಿಸಲಾಗುತ್ತಿದೆ.
ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿನ  2016-17ರ ಸಾಧನೆಗಾಗಿ ಹಾಡವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಶ್ರೀಧರ ಮಂಜು ಶೆಟ್ಟಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ಎಂ ನಾಯ್ಕ, ಮನೆಕರ ವಸೂಲಾತಿಗಾಗಿ ಮಾವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರತ್ನ ಪಡಿಯಾರ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ಮಾರುತಿ ದೇವಾಡಿಗ,  ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕಾಗಿ ಬೇಂಗ್ರೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ವೆಂಕ್ಟಯ್ಯ ಬೈರುಮನೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ಮಹೇಶ ವಿ ನಾಯ್ಕ, ಸ್ವಚ್ಚ ಭಾರತ ಮಿಶನ್ ಸಾಧನೆಗಾಗಿ ಮಾರುಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ  ಶ್ರೀ ನಾರಾಯಣ ಎಸ್. ಹೆಬ್ಬಾರ  ಪಂಚಾಯತ ಅಭಿವೃದ್ಧಿ ಅಧಿಕಾರಿ  ಮಹೇಶ ಎಸ್. ನಾಯ್ಕ ರವರನ್ನು ಎಪ್ರಿಲ್ 25 ರಂದು ಉತ್ತರಕನ್ನಡ ಜಿಲ್ಲಾ ಪಂಚಾಯತ ವತಿಯಿಂದ ಕಾರವಾರದಲ್ಲಿ ಅಭಿನಂದನಾ  ಸಮಾರಂಭದಲ್ಲಿ ಗೌರವಿಸಲಾಗುವುದೆಂದು ತಿಳಿದು ಬಂದಿದೆ. 
 

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...