ಕಾರವಾರ:ಕೇಂದ್ರ ಕೌಶಲ್ಯ ಮಂತ್ರಿ ಅನಂತ ಕುಮಾರ್ ಹೆಗಡೆಯವರ ಕಾರವಾರ ಕಛೇರಿಗೆ ಮನವಿ ಕೊಡಲು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಎಚ್.ಎಸ್ ಮತ್ತು ನಾವೆಲ್ಲ ಜಿಲ್ಲಾ ಪದಾಧಿಕಾರಿಗಳು ಹೋಗಿದ್ದೆವು.
ಈ ಕಛೇರಿಯ ಬಾಗಿಲು ಹಾಕಿದ್ದು ನೋಡಿ ಆಶ್ಚರ್ಯವೂ ಬೇಸರವೈ ಆಯಿತು. ಈಗ ಇಲ್ಲಿಯ ಕಛೇರಿಯು ಕೆಲಸ ಮಾಡದೇ ಹದಿನೈದು ದಿನಕ್ಕೂ ಮೇಲಾಗಿದೆಯಂತೆ. ಹಾಗಾಗಿ ಬಾಗಿಲ ಸಂಧಿಯಿಂದ ಒಳತೂರಿ ಬಂದೆವು. ಸಂಘಟನೆಯ ಪರವಾಗಿ ಶಿರಸಿ ಕಛೆರಿಗೆ ಹೋಗಿ ಈ ಮನವಿಯ ರಿಸೀವ್ಡ ತರಲು ನಿರ್ಧರಿಸಿದ್ದೇವೆ. ಜೊತೆಗೆ ಜಿಲ್ಲಾ ಕೇಂದ್ರದಲ್ಲಿರುವ ಮಂತ್ರಿಗಳ ಕಛೇರಿ ಕೆಲಸನಿರತವಾಗಬೇಕೆಂದು, ಅಹವಾಲು ಇಟ್ಟು ಬರುವ ಜಿಲ್ಲೆಯ ಹಾಗೂ ಕೆನರಾ ಕ್ಷೇತ್ರದ ಜನತೆಯ ಸಲುವಾಗಿ ಮಂತ್ರಿಗಳು ಸಿಗದಿದ್ದರೂ ಕಛೇರಿಯಾದರೂ ತೆರೆದಿರಬೇಕೆಂದು ಆಗ್ರಹಿಸುತ್ತೇವೆ.
ನಮ್ಮ ಮನವಿಯ ಮುಖ್ಯಾಂಶವೇನೆಂದರೆ, ಅಂಗನವಾಡಿಗಳಿಗೆ ಕೇಂದ್ರದ ಅನುದಾನ ಸರಿಯಾಗಿ ನೀಡಬೇಕೆಂದು, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಹಾಗೂ ಪ್ಯಾಕೆಟ್ ಆಹಾರ ಬೇಡವೆಂದು, ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಲಾಗದೆಂದು ಲೋಕಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದ್ದನ್ನು ನಾವು ಒಪ್ಪಲಾಗದೆಂದು ಮಾನ್ಯ ಸಚಿವರು ಅಂಗನವಾಡಿ ನೌಕರರ ಪರವಾಗಿ ಲೋಕಸಭೆಯಲ್ಲಿ ವಾದಿಸಬೇಕೆಂದು ಅದಕ್ಕಾಗಿ ಜನವರಿ 17 ರಂದು ಅವರ ಮನೆ ಮುಂದೆ ಹೋಗಿ ಮನವಿ ನೀಡುತ್ತಿದ್ದೇವೆ ಅಂದು ಮನವಿ ಸ್ವೀಕರಿಸಲು ಆಗಮಿಸಿರೆಂದು ಆಹ್ವಾನ ಪತ್ರ ನೀಡಲು ಇಂದು ಹೋಗಿದ್ದೆವು. ಕ. ರಾ. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಯಮುನಾ ಗಾಂವ್ಕರ್, ಮೋಹಿನಿ ನಮ್ಸೇಕರ್, ಲಲಿತಾ ಹೆಗಡೆ, ಲಕ್ಷ್ಮಿ ಸಿದ್ದಿ, ಶಾಲಿನಿ ಕಲ್ಮನೆ ಇನ್ನುಳಿದ ಪದಾಧಿಕಾರಿಗಳು ಇದ್ದರು.