ಪ್ರಧಾನ ದ್ವಾರದ ಉಧ್ಘಾಟನಾ ಸಮಾರಂಭ

Source: sonews | By Staff Correspondent | Published on 4th December 2018, 5:48 PM | Coastal News | Don't Miss |

ಕಾರ್ಕಳದಾರುಲ್ ಉಲೂಮ್ ಅಲ್ ಮಆರಿಫ್, ಕಾರ್ಕಳಇದರ ನೂತನ ಪ್ರಧಾನ ದ್ವಾರದ ಉದ್ಘಾಟನಾ ಸಮಾರಂಭ ನಡೆಯಿತು.

ನೂತನ ದ್ವಾರದ ಸಂಪೂರ್ಣ ಖರ್ಚು ವೆಚ್ಚಗಳನ್ನು ಪುಲ್ಕೇರಿ, ಕಾರ್ಕಳದ ನಿವಾಸಿಯಾಗಿರುವ ಜನಾಬ್ ಹಾಜಿ ಇಕ್ಬಾಲ್ ಭಾಯ್ ಯವರು ನೀಡಿದರು. ಮದ್ರಸದ ಪ್ರಾಂಶುಪಾಲರಾದ ಹಝ್ರತ್ ಮುಫ್ತಿ ಅಬ್ದುಲ್ ರಹಿಮಾನ್ ಅಲ್ ಕಾಸಿಮಿಯವರ ದುವಾದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಕಳ ಮುಸ್ಲಿಮ್ ಜಮಾತ್ ಅಧ್ಯಕ್ಷರಾದ ಜನಾಬ್ ಅಶ್ಫಾಕ್ ಅಹ್ಮದ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಜನಾಬ್ ಹಾಜಿ ಇಕ್ಬಾಲ್ ಭಾಯ್, ಜನಾಬ್ ಇಂಜಿನಿಯರ್ ನಾಸಿರ್, ಜನಾಬ್  ಜನಾಬ್ ತೌಸೀಫ್, ಜನಾಬ್ ಇಸ್ಹಾಕ್ , ಜನಾಬ್ ಅಬ್ದುಲ್ ಕರೀಮ್, ಜನಾಬ್ ಮೌಲಾನಾ ರಿಝ್ವಾನ್ ಅಹ್ಮದ್ ಪತ್ತೊಂಜಿಕಟ್ಟೆ, ಹಾಗೂ ಮದ್ರಸದ ಎಲ್ಲಾ ಉಸ್ತಾದರುಗಳು ಉಪಸ್ಥಿತರಿದ್ದರು.

ಮುಫ್ತಿ ರಿಯಾಝ್ ರವರು ಕಿರಾತ್ ಪಠಿಸಿದರು. ಮುಫ್ತಿ ಇಮ್ದಾದುಲ್ಲಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪುಲ್ಕೇರಿ ಮೊಹಲ್ಲಾದ ಯೆಂಗ್ ಮೆನ್ಸ್ ನ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ತುಂಬು ಹೃದಯದಿಂದ ಸಹಕರಿಸಿದರು.

ವರದಿ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...