ಭಟ್ಕಳ: ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರಿಯಾಗಿ ಬಂದ 8 ಫಲಾನುಭವಿಗಳಿಗೆ ಪರಿಹಾರದ ಚೆಕ್ಕನ್ನು ಶಾಸಕ ಸುನಿಲ್ ನಾಯ್ಕ ಇಲ್ಲಿನ ತಾಲೂಕಾ ಪಂಚಾಯತ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ವಿವಿಧ ಕಾಯಿಲೆಗಳಿಗಾಗಿ ಚಿಕಿತ್ಸೆಯನ್ನು ಪಡೆದಿರುವ ತಾಲೂಕಿನ ಬಡವರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ದೊರೆತಿದ್ದು ಶಾಸಕ ಸುನಿಲ್ ನಾಯ್ಕ ಅವರು ಚೆಕ್ಕನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ತಾಲೂಕಿನ 8 ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ತನ್ನ ನಾಲ್ಕು ತಿಂಗಳ ಅವಧಿಯಲ್ಲಿ ಇಲ್ಲಿಯ ತನಕ 8 ಲಕ್ಷಕ್ಕೂ ಹೆಚ್ಚು ಹಣವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ವಿತರಿಸಿದ್ದು ಬಡವರಿಗೆ ಇದರಿಂದ ಸಹಾಯಕವಾಗಿದೆ. ಮುಖ್ಯ ಮಂತ್ರಿಗಳ ಕಚೇರಿಯನ್ನು ಸಂಪರ್ಕಿಸಿ ಇಲ್ಲಿನ ಜನರ ಸಂಕಷ್ಟಗಳನ್ನು ತಿಳಿಸಿ ಅತೀ ಹೆಚ್ಚು ಹಣವನ್ನು ಮಂಜೂರಿ ಮಾಡಿಸಲು ಶ್ರಮಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಾ ನಾಯ್ಕ ಆಸರಕೇರಿ, ಸಿ.ಎಸ್.ನಾಯ್ಕ ಮಂಕಿ, ದೀನೇಶ ನಾಯ್ಕ, ಸುರೇಶ ನಾಯ್ಕ, ಸುಬ್ರಾಯ ದೇವಾಡಿಗ, ಸುಬ್ರಾಯ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.