ಮಾರುಕೇರಿಯಲ್ಲಿ ಅತಿಕ್ರಮಿತ ಹಾಡಿ ಖುಲ್ಲಾ ಪಡಿಸಲು ಆಗ್ರಹ

Source: sonews | By Staff Correspondent | Published on 10th January 2019, 11:17 PM | Coastal News | Don't Miss |

ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಿತ್ರೆಯಲ್ಲಿ ಸರಕಾರಿ ಹಾಡಿಯನ್ನು ಅತಿಕ್ರಮಿಸಿಕೊಂಡು ಕಂಪೌಂಡ್ ನಿರ್ಮಿಸಿದ್ದು, ಇದರಿಂದ ಸಾರ್ವಜನಿಕರಿಗೆ ರಸ್ತೆ ಇಲ್ಲದಂತಾಗಿದೆ ಎಂದು ಆಪಾದಿಸಿರುವ ಅಲ್ಲಿನ ಗ್ರಾಮಸ್ಥರು ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
 
ಮಾರುಕೇರಿ ಕಿತ್ರೆ ಗ್ರಾಮದ ಹಾಡಿ ಸರ್ವೇ ನಂಬರ್ 87 ಹಿಸ್ಸಾ ಕ್ಷೇತ್ರ 1-10-00ನೇದರ ಜಮೀನು ಹಾಡಿ ಜಮೀನಾಗಿದ್ದು, ಈ ಜಮೀನಿನಲ್ಲಿ ಸಾರ್ವಜನಿಕರ ಉದ್ದೇಶಕ್ಕೆ 10 ಅಡಿ ಅಗಲದ ರಸ್ತೆ ಹಾಗೂ ಅದರ ಒಂದು ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ ಖಾಸಗಿ ವ್ಯಕ್ತಿಯೋರ್ವರು ಸದರಿ ಹಾಡಿ ಭೂಮಿಯನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕ ಉಪಯೋಗದ ರಸ್ತೆ ಮತ್ತು ಚರಂಡಿಯ ಜಾಗದಲ್ಲಿ ಕಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ರಸ್ತೆಯ ಅಗಲ ಕಿರಿದಾಗಿದ್ದು, ಚರಂಡಿಗೂ ಜಾಗ ಇಲ್ಲದಾಗಿದೆ. ರಸ್ತೆಯಲ್ಲಿ ಲಾರಿ ಓಡಾಡಲು ಆಗದೇ ನಮ್ಮ ಊರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಇವರು ಸಾರ್ವಜನಿಕರ ಹಕ್ಕು ಮೊಟಕುಗೊಳಿಸಿದಂತಾಗಿದೆ. ಆದ್ದರಿಂದ ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಹಸೀಲ್ದಾರ ವಿ.ಎನ್.ಬಾಡ್ಕರ್ ಮನವಿಯನ್ನು ಸ್ವೀಕರಿಸಿದರು. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...