ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣ ತಿನಿಸಿ, ಮನೆ ಕಳ್ಳತನ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ, ಇಬ್ಬರು ಕುಖ್ಯಾತ ಅಂತರ ರಾಜ್ಯ ಮನೆ ಕಳ್ಳರನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಟ್ಟು 42 ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಳಗಾವಿ ಮೂಲದ ಪ್ರಕಾಶ್ ಪಾಟೀಲ್, ಗೋವಾ ಮೂಲದ ರವಿ ಧನರಾಜ್ ನನ್ನ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಂಗರಾಜ್ಯ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳಿಂದ 23 ಲಕ್ಷ ಮೌಲ್ಯದ 832 ಗ್ರಾಂ ಚಿನ್ನ ಆಭರಣ, ಒಂದು ಕೇಜಿ ಬೆಳ್ಳಿ.
ಒಂದು ಮೇಡ್ ಇನ್ ಯುಎಸ್ ಎ ಪಿಸ್ತೂಲ್.(7.65 ಎಂ.ಎಂ)
ಮೂರು ಜೀವಂತ ಗುಂಡುಗಳು,
ಬಜಾಜ್ ಬೈಕ್ , ನಾಲ್ಕು ಮೊಬೈಲ್. ಮನೆಗಳ್ಳತನಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಹುಬ್ಬಳ್ಳಿಯ ಲ್ಲಿ ಬಾಡಿಗೆ ಮನೆ ಮಾಡಿ, ಒಂಟಿ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದರು, ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ, ದರೋಡೆ ಮಾಡುತ್ತಿದ್ದರು. ಯಾರಾದರು ಕಂಡ್ರೆ ಅಂತವರನ್ನ ಪಿಸ್ತೂಲ್ ತೊರಿಸಿ ಬೆದರಿಸಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದೇ ಹುಬ್ಬಳ್ಳಿಯ
ಸಿಸಿಬಿ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ್ ಸಜ್ಜನ್ ಅವರ ನವನಗರ ಮನೆ ದರೋಡೆ ಸೇರಿದಂತೆ ಅವಳಿ ನಗರದಲ್ಲಿ ಎರಡು ಮನೆಗಳ್ಳತನ ಪ್ರಕರಣದಲ್ಲಿ ಅವಳಿ ನಗರ ಪೊಲೀಸರಿಗೆ ಬೇಕಾಗಿದ್ದರು. ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದರು. ರಾಜ್ಯದಲ್ಲಿ 10 ಮನೆಗಳ್ಳತನ ಪ್ರಕರಣಗಳು, ಮಹಾರಾಷ್ಟ್ರ ರಾಜ್ಯದಲ್ಲಿ 10 ಹಾಗೂ ಗೋವಾ ರಾಜ್ಯದ 6 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆರೋಪಿ ಗಳ ಬಂಧನದ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಧಾರವಾಡ ಉಪ ಪೋಲೀಸ್ ಆಯುಕ್ತ, ಪಿಎಸ್ ನ್ಯಾಮಗೌಡ ಆರೋಪಿಗಳ ಬಂಧಿಸಿದ ಪೊಲೀಸರಿಗೆ ಬಹುಮಾನ ಘೋಷಿಸಿದರು.