ಹುಬ್ಬಳ್ಳಿ:ಮೂರು ವರ್ಷಗಳ ಹಿಂದೆ ಹೂತಿದ್ದ ಶವ ಕೊಳೆಯದೇ ಉಳಿದ ಅಚ್ಚರಿ

Source: so english | By Arshad Koppa | Published on 24th September 2017, 8:28 AM | State News |

ಹುಬ್ಬಳ್ಳಿ:.ಕಳೆದ ಮೂರು ವರ್ಷಗಳ ಹಿಂದೆ ಹೂತಿದ್ದ ಶವ ಕೊಳೆಯದೆ ಹಾಗೆ ಉಳಿದಿರುವ ಅಪರೂಪ ಹಾಗೂ ಅಚ್ಚರಿಯ ಘಟನೆ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ. 
ದಾಸ್ತಿ ಕೊಪ್ಪದ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ನಿಂಗಮ್ಮಾ ಹುಗ್ಗಿ (70) ಮೃತಪಟ್ಟಿದ್ದರು. ಅವರ ಶವ ಸಂಸ್ಕಾರ ಮಾಡಲು ಗುಂಡಿ ತೆಗೆಯುವಾಗ ಹೂಳಿದ ರೀತಿಯಲ್ಲಿಯೇ ಶವ ಪತ್ತೆಯಾಗಿ ಅಚ್ಚರಿಯನ್ನುಂಟು ಮಾಡಿದೆ. ಕಳೆದ  ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ‌.


ಕಳೆದ ಮೂರು ವರ್ಷದ ಹಿಂದೆ ಸಾವಿಗೀಡಾದ ಶಿವಲಿಂಗಪ್ಪ ಕೊಪ್ಪದ (60) ಎಂಬುವರನ್ನು
ಗ್ರಾಮದ ಹೊರವಲಯದಲ್ಲಿ ಹೂಳಲಾಗಿತ್ತು. ಆದ್ರೆ ಮತ್ತೊಂದು ಶವ ಹೂಳಲು ಗುಂಡಿ ತೊಡುವಾಗ ಶವ ಹೂತು ಮೂರು ವರ್ಷ ಆದರೂ ಕೊಳಯದೆ ಹಾಗೆ ಇರುವದನ್ನು ಕಂಡು ಅಚ್ಚರಿಗೊಂಡಿದ್ದಾರೆ.  
ಕೊನೆಗೆ ಗ್ರಾಮದ ಹಿರಿಯರು ಸೇರಿ ಮತ್ತೆ  ಶವ ಹೊರತೆಗೆದು ಸುಟ್ಟು ಹಾಕಿದ್ದಾರೆ. ಆದ್ರೆ ಕಳೆದ ಮೂರು ವರ್ಷಗಳ ಹಿಂದೆ ಹೂತ್ತಿದ್ದ ಶವ ಹಾಗೇ ಇರುವದು ಕಂಡ ಗ್ರಾಮಸ್ಥರು ಚಕಿತಗೊಂಡಿದ್ದಾರೆ. ಈ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡ ಚರ್ಚೆಯೇ ನಡೆಯುತ್ತಿದೆ‌. ಸಾರ್ವಜನಿಕರು ಅಂತೆ ಕಂತೆಗಳ ಕಥೆ ಕಟ್ಟಿ ಮಾತನಾಡುಕೊಳ್ಳುತ್ತಿದ್ದಾರೆ.‌

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...