ಕುಮಟಾ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದರೋಡೆಕೋರರು ಮನೆಯ ಮುಂಬಾಗಿಲು ಮುರಿದು ೨ಲಕ್ಷ ರೂ ನಗದು ಸೇರಿದಂತೆ ಅಪಾರ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಕುಮಟಾ ತಾಲೂಕಿನ ಕೊಪ್ಪಳಕರವಾಡದಲ್ಲಿ ಜರಗಿದೆ.
ಝರಿನಾ ಶೇಕ್ ಎಂಬುವವರ ಮನೆಯೆ ದರೋಡೆಗೊಳಗಾಗಿದ್ದು ಇವರು ಕೊಲ್ಲಾಪುರದ ದರ್ಗಾವೊಂದಕ್ಕೆ ಕುಟುಂಬ ಸಮೇತ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು 36 ತೊಲೆ ಬಂಗಾರ, 2 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.