ತಮ್ಮ ಮನೆಯ ಗಣಪತಿಯನ್ನು ತಾವು ನಿರ್ಮಿಸುವ ಹೋಟೆಲ್ ಉದ್ಯಮಿ  ಕಾಮತ್

Source: sonews | By Staff Correspondent | Published on 23rd August 2018, 10:35 PM | Coastal News | State News | Special Report | Don't Miss |

ಭಟ್ಕಳ: ತನ್ನ ಕೈ ಕೆಳಗೆ ನೂರಾರು ಮಂದಿ ಕೆಲಸಗಾರರಿದ್ದರೂ ಹಿರಿಯರ ಸಂಪ್ರದಾಯವನ್ನು ಪಾಲಿಸಲು ಹಿಂಜರಿಯದ ಹೋಟೆಲ್ ಉದ್ಯಮಿ ಭಟ್ಕಳ ಮೂಲದ ಮುಂಬೈ ನಿವಾಸಿ ವಿಠಲ್ ರಾಮಚಂದ್ರ ಕಾಮತ್, ಪ್ರತಿವರ್ಷ ಗಣೇಶ ಚೌತಿಗೆ ಒಂದು ತಿಂಗಳು ಮುಂಚೆ ಭಟ್ಕಳಕ್ಕೆ ಬಂದು ತನ್ನ ಕೈಯಿಂದ ಗಣೇಶನ ಸುಂದರ ವಿಗ್ರಹವನ್ನು ನಿರ್ಮಿಸಿ ಗಣಪತಿಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.  

ಹಿರಿಯರು ಪಾಲಿಸಿ ಬಂದ ಸಂಸ್ಕøತಿ, ಪರಂಪರೆಯನ್ನು ಇಂದಿಗೂ ಮುಂದುವರೆಸಿ, ತಿಂಗಳುಗಟ್ಟಲೆ ಹೋಟೆಲ್ ಉದ್ಯಮ ಬಿಟ್ಟು ತಮ್ಮ ಗಣಪತಿಯನ್ನು ತಾವೆ ನಿರ್ಮಿಸಿ ವಿಜೃಂಬಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲು ಕಾಮತ ಕುಟುಂಬ ಸಜ್ಜಾಗುತ್ತಿದೆ.
 
ಮೂಲತಃ ಭಟ್ಕಳ ನಿವಾಸಿ, ಮಹಾರಾಷ್ಟ್ರದ ಕಣ್‍ಕೌಲಿಯಲ್ಲಿ ಮಂಜುನಾಥ ಹೋಟೆಲ್ ಉದ್ಯೋಗ ನಡೆಸುತ್ತಿರುವ ವಿಠಲ್ ರಾಮಚಂದ್ರ ಕಾಮತ ಕುಟುಂಬ ತಮ್ಮ ಮನೆಯ ಗಣಪತಿಯನ್ನ ತಾವೆ ನಿರ್ಮಿಸುತ್ತಿದ್ದಾರೆ . ಸುಮಾರು 60ವರ್ಷಗಳ ಹಿಂದೆ ಅವರ ಪೂರ್ವಿಕರು ಊರಿಗೆಲ್ಲಾ ಗಣಪತಿ ಮೂರ್ತಿ ಮಾಡಿಕೋಡುತ್ತಿದ್ದರು. ಮನೆಯ ಸದಸ್ಯರು ಉದ್ಯೋಗ ಆರಿಸಿ ಪರ ಊರಿಗೆ ವಲಸೆ ಹೋದ ಪರಿಣಾಮ ಕ್ರಮೇಣ ಗಣಪತಿ ಮೂರ್ತಿ ಮಾಡುವ ಕಾಯಕ ಅಲ್ಲಿಗೆ ನಿಂತಿತು. ಆದರೆ ಅವರ ಕುಟುಂಬದ ಹಿರಿಯರು ನಮ್ಮ ಮನೆಯ ಗಣಪತಿ ನಾವೆ ತಯಾರಿಸಬೇಕು, ನಾವು ಆರಾಧಿಸುತ್ತಿದ್ದ ವಡೇರ ಮಠಕ್ಕೂ ನಮ್ಮ ವಂಶಸ್ಥರ ಕೈಯಿಂದ ನಿರ್ಮಿಸಿದ ಗಣಪತಿಯನ್ನು ನೀಡಬೇಕು ಎಂದು ಬಯಸಿದ್ದರು. ಅದನ್ನು ಚಾಚು ತಪ್ಪದೆ ಈ ಕುಟುಂಬ ಪಾಲಿಸಿ ಬಂದಿದ್ದು ಗಣಪತಿಯ ಹಬ್ಬಕ್ಕೆ ತಿಂಗಳು  ಇರುವಾಗ ಅವರ ಕುಟುಂಬದ ವಿಠಲ್ ಕಾಮತ ಭಟ್ಕಳಕ್ಕೆ ಬಂದು ವಿಗ್ರಹದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಒಟ್ಟಾರೆಯಾಗಿ 3 ಗಣಪತಿ ನಿರ್ಮಿಸುತ್ತಾರೆ. ಅದರಲ್ಲೂ ಸಂಪ್ರದಾಯದಂತೆ ಜೇಡಿಮಣ್ಣಿನ ಪರಿಸರ ಸ್ನೇಹಿ ಸುಂದರ ಗಣಪತಿ ವಿಗ್ರಹ ನಿರ್ಮಿಸುತ್ತಾರೆ.
    
ಮಹರಾಷ್ಟ್ರದ ಕಣಕೌಲಿಯಲ್ಲಿ ಹೊಟೇಲ್ ಉದ್ಯೋಗ ನಡೆಸುತ್ತಿರುವ ಇವರ ಕೈಕೆಳಗೆ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಹಣವೊಂದೆ ಮುಖ್ಯವಲ್ಲ, ಹಿರಿಯರ ಸಂಪ್ರದಾಯ, ಆಚರಣೆಯನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಮನಸ್ಸಿಗೆ ತೃಪ್ತಿ ದೊರೆಯುವದಲ್ಲದೆ, ಧಾರ್ಮಿಕ ಕಾರ್ಯದಲ್ಲಿ ತೊಡಗೊಕೊಂಡ ಸಂತೋಷವೂ ದೊರಕುತ್ತದೆ ಎನ್ನುತ್ತಾರೆ ವಿಠಲ್ ಕಾಮತ.  ತಿಂಗಳುಗಟ್ಟಲೆ ವ್ಯವಹಾರವನ್ನು ಬದಿಗಿರಿಸಿ ಸ್ವತಃ ಗಣಪತಿ ತಯಾರಿಸುವ ಬದಲು ಮೂರ್ತಿ ತಯಾರಿಸುವವರ ಹತ್ತಿರ ಮಾಡಿಸಬಹುದಿತ್ತು. ಆದರೆ ಹಿರಿಯರ ಸಂಪ್ರದಾಯ, ಬದ್ದತೆ, ಪರಂಪರೆ ನಮ್ಮ ಮುಂದಿನ ಪೀಳಿಗೆಯೂ ಪಾಲಿಸಬೇಕು ಎನ್ನವದು ಅವರ ಬಯಕೆ.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...