ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ: ಪ್ರಧಾನಿ ಮೋದಿ

Source: S O News | By MV Bhatkal | Published on 31st December 2016, 9:08 PM | National News | Don't Miss |

ಹೊಸದಿಲ್ಲಿ: ನೋಟ್‌ ಬ್ಯಾನ್ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ, 'ಶುದ್ಧಿ ಯಜ್ಞ' ಎಂದು ಬಣ್ಣಿಸಿದ್ದಾರೆ.

ಹೊಸ ವರ್ಷದ ಮುನ್ನಾದಿನ ಶನಿವಾರ ಸಂಜೆ 7:30ಕ್ಕೆ ಪ್ರಧಾನಿ ನರೇಂದ್ರ ಮೋದಿ, ನೋಟು ನಿಷೇಧದ 50 ದಿನಗಳ ನೋವನ್ನು ಸಹಿಸಿಕೊಂಡು ಭ್ರಷ್ಟಾಚಾರ ವಿರುದ್ಧ ಸಮರದಲ್ಲಿ ಸರಕಾರವನ್ನು ಬೆಂಬಲಿಸಿದ್ದಕ್ಕಾಗಿ ದೇಶದ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಭಾಷಣದ ಪ್ರಮುಖಾಂಶ:

*ನೋಟ್‌ ಬ್ಯಾನ್‌ನಿಂದ ರೈತರು ಕಂಗಾಲಾಗಿದ್ದಾರೆ ಎಂಬ ಟೀಕೆ ಕೇಳಿಬಂದರೂ, ಹಿಂಗಾರು ಬೆಳೆ ಪ್ರಮಾಣ ಶೇ.6 ಹಾಗೂ ರಸಗೊಬ್ಬರದ ಮಾರಾಟ ಶೇ.9 ರಷ್ಟು ಏರಿಕೆ ಆಗಿದೆ.

*BHIM app ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜನರನ್ನು ಆಗ್ರಹಿಸುತ್ತೇನೆ.

*ಎಲ್ಲ ರಾಜಕೀಯ ಪಕ್ಷಗಳು ರಾಜಕೀಯವನ್ನು ಬದಿಗಿಟ್ಟು, ಪಾರದರ್ಶಕತೆಗೆ ಒತ್ತು ನೀಡಲಿ.

*ಸಣ್ಣ ವರ್ತಕರ ಸಾಲ ಮಿತಿಯನ್ನು ಶೇ.20ರಿಂದ ಶೇ.25ಕ್ಕೆ ಏರಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

*ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲ ಗರ್ಭಿಣಿಯರ ಬ್ಯಾಂಕ್‌ ಖಾತೆಗೆ 6,000 ರೂ. ಜಮೆ ಮಾಡಲಾಗುವುದು.

*ಸಣ್ಣ ವರ್ತಕರ ಸಾಲ ಮಿತಿಯನ್ನು 2 ಕೋಟಿ ರೂ.ವರೆಗೆ ಏರಿಸಲಾಗುವುದು.

*ಹಿರಿಯ ನಾಗರಿಕರ 7,50,00 ರೂ.ವರೆಗಿನ ಠೇವಣಿಗೆ ಶೇ.8ರಷ್ಟು ಬಡ್ಡಿ ನೀಡಲಾಗುವುದು.

*ಜನ ತಮ್ಮದೇ ಹಣ ಪಡೆಯಲು ಗಂಟಗಟ್ಟಲೇ ಸರದಿ ಸಾಲಿನಲ್ಲಿ ನಿಂತರೂ, ಭ್ರಷ್ಟಚಾರದ ವಿರುದ್ಧದ ಹೋರಾಟದಲ್ಲಿ ಹೆಜ್ಜೆ ಹಿಂದಿಡಲಿಲ್ಲ.

*ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ವಾರ್ಷಿಕ ವರಮಾನ ಹೊಂದಿರುವವರು ಕೇವಲ 24 ಲಕ್ಷ ಜನ. ನಮ್ಮ ಸುತ್ತಮುತ್ತ ದೊಡ್ಡ ಬಂಗಲೆಗಳು, ಐಷಾರಾಮಿ ಕಾರುಗಳನ್ನು ನೋಡುತ್ತಿದ್ದರೂ, ಅಂಕಿ ಅಂಶಗಳು ಹೇಳಿರುವುದೇ ಬೇರೆ.

* ದೇಶದ ನಾಗರಿಕರು ತಮ್ಮ ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ.

*ಕಪ್ಪು ಹಣದಿಂದಲೇ ನಕ್ಸಲ್‌, ಭಯೋತ್ಪಾದನಾ ಚಟುವಟಿಕೆ, ಪರ್ಯಾಯ ಆರ್ಥಿಕ ವಹಿವಾಟು ನಡೆಯುತ್ತಿದೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ.

*ಸರಕಾರಿ ಅಧಿಕಾರಿಗಳು ಅಮಾಯಕರನ್ನು ರಕ್ಷಿಸುವ ಜತೆ ಭ್ರಷ್ಟರ ವಿರುದ್ಧ ಕ್ರಮ ಕೊಳ್ಳಬೇಕು.

*ಬಡ ಹಾಗೂ ಮಧ್ಯಮ ವರ್ಗದವರ 9 ಲಕ್ಷರೂ. ವರೆಗಿನ ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ಶೇ.4ರಷ್ಟು ಹಾಗೂ 12 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿಯಲ್ಲಿ ಶೇ.3ರಷ್ಟು ವಿನಾಯಿತಿ ದೊರೆಯಲಿದೆ.

*ಬಡ ಹಾಗೂ ಮಧ್ಯಮ ವರ್ಗದವರು ಮನೆ ಖರೀದಿಸಲು ಅನುಕೂಲವಾಗುವಂಥ ಕೆಲ ಕ್ರಮಗಳನ್ನು ಸರಕಾರ ಕೈಗೊಳ್ಳಲ್ಲಿದೆ. ಬಡ ಜನರಿಗೆ ಕಟ್ಟಡ/ಮನೆ ಕೊಳ್ಳಲು ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ 2 ಹೊಸ ಯೋಜನೆಗಳನ್ನು ಜಾರಿ ತರಲಾಗುವುದು.

* ಬಡ ಹಾಗೂ ಮಧ್ಯಮ ವರ್ಗದವರ 9 ಲಕ್ಷರೂ. ವರೆಗಿನ ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ಶೇ.4ರಷ್ಟು ಹಾಗೂ 12 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿಯಲ್ಲಿ ಶೇ.3ರಷ್ಟು ವಿನಾಯಿತಿ ದೊರೆಯಲಿದೆ.

*ರೈತರ ಆಯ್ದ ಸಾಲಗಳ, 60 ದಿನಗಳ ಬಡ್ಡಿ ಹಣವನ್ನು ಸರಕಾರವೇ ಭರಸಲಿದೆ. ಈಗಾಗಲೇ ಬಡ್ಡಿ ಪಾವತಿಸಿದ್ದರೆ, ಆ ಮೊತ್ತವನ್ನು ಹಿಂದಿರುಗಿಸಲಾಗುವುದು.

*ಮುಂದಿನ 3 ತಿಂಗಳಲ್ಲಿ, 3 ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ರೂಪೇ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಕಾರ್ಡ್‌ ಮೂಲಕ ನೇರ ಖರೀದಿ/ಮಾರಾಟ ಸಾಧ್ಯವಾಗಲಿದೆ. ಇದರಿಂದ ರೈತರು ಬ್ಯಾಂಕ್‌ಗಳಿಗೆ ಧಾವಿಸಬೇಕಿಲ್ಲ.

*ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ನಡೆದಿದೆ.

*ಪ್ರಾಮಾಣಿಕ ಭಾರತೀಯರು ಭ್ರಷ್ಟಾಚಾರದ ವಿರುದ್ಧ ಜಯ ಸಾಧಿಸಿದ್ದಾರೆ.

*ಈ ಕಳೆದ 50 ದಿನಗಳಲ್ಲಿ ನಾಗರಿಕರು ಏನೋ ಮಾಡಿದ್ದರೋ, ಅದೀಗ ಮಾದರಿಯಾಗಿದೆ. ಇದನ್ನು ಯಾವುದಕ್ಕೂ ಹೋಲಿಸಲಾಗದು.

* 50 ದಿನಗಳ ಅವಧಿಯಲ್ಲಿ ಜನ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಈ ಬಗ್ಗೆ ನನಗೂ ತಿಳಿಸಿದ್ದಾರೆ.

*ಭ್ರಷ್ಟರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು, ಕಠಿಣ ಕ್ರಮ ಜರುಗಿಸಲಾಗುವುದು.

*ಈ ಸರಕಾರ ಸಜ್ಜನರ ಮಿತ್ರ, ದುರ್ಜನರನ್ನು ಸಜ್ಜನರ ಹಾದಿಗೆ ತರುವ ಪ್ರಯತ್ನ ಮಾಡಲಿದೆ.

*ನೋಟ್‌ ಬ್ಯಾನ್‌ನಿಂದ ಸಮಸ್ಯೆ ಎದುರಿಸುತ್ತಿದ್ದರೂ, ಸತ್ಯ ಹಾಗೂ ಪ್ರಾಮಾಣಿಕತೆಯೇ ಜೀವನದಲ್ಲಿ ಮುಖ್ಯ ಎಂದು 125 ಕೋಟಿ ನಾಗರಿಕರು ಸಾಬೀತು ಪಡಿಸಿದ್ದಾರೆ.

*ಸದ್ಯ ನಮ್ಮಲ್ಲಿ ಆಗುತ್ತಿರುವ ಹಣದ ಚಲಾವಣೆ ಬೇರಾವ ಆರ್ಥಿಕತೆಯಲ್ಲೂ ಆಗಿಲ್ಲ.

*ಈ ದೇಶದ ಜನತೆ ನಡೆದಕೊಂಡಿರುವ ರೀತಿಯನ್ನು ರಾಮ್‌ ಮನೋಹರ್‌ ಲೋಹಿಯಾ, ಲಾಲ್‌ ಬಹಾದೂರ್‌ ಶಾಸ್ತ್ರಿ ಹಾಗೂ ಇನ್ನಿತರ ನಾಯಕರು ಇದ್ದಿದ್ದರೆ ಶ್ಲಾಘಿಸುತ್ತಿದ್ದರು.

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...