ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಕಳ್ಳರು ಮನೆಯೊಂದರ ಹಿತ್ತಲ ಬಾಗಿಲಿನಿಂದ ಪ್ರವೇಶಿಸಿ ಬೆಲಬಾಳುವ ಬಂಗಾರ ಸರವನ್ನು ಕದ್ದುಕೊಂಡು ಹೋಗಿದ್ದಾರೆ.
ರಾಧಾಕೃಷ್ಣ ಶಿವರಾಮ ರಾಯ್ಕರ ಎಂಬುವರ ಮನೆ ಕಳುವಾಗಿದ್ದು ಆಗಸ್ಟ್.19ರಿಂದ ಅಕ್ಟೋಬರ 9 ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಹಿತ್ತಲ ಬಾಗಿಲಿನಿಂದ ಪ್ರವೇಶಿಸಿ ಅಲ್ಮೇರಾದಲ್ಲಿದ್ದ 20 ಗ್ರಾಂನ ಸುಮಾರು 23,000 ರೂ. ಬೆಲೆ ಬಾಳುವ ಬಂಗಾರದ ಅವಲಕ್ಕಿ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ರಾಧಾಕೃಷ್ಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.